‘ರಕ್ಷಣೆಗೆ ಒಳಗಾದ ಮಕ್ಕಳೆಲ್ಲ 14 ವರ್ಷದ ಒಳಗಿನವರಾಗಿದ್ದಾರೆ. ಇವರ ಪೋಷಕರು ಸದ್ಯ ಚಿಂದಿ ಆಯಲು ಹೋಗುತ್ತಿದ್ದು, ಮಕ್ಕಳು ಮೈದಾನದಲ್ಲೇ ಇರುತ್ತಿದ್ದವು. ಅವರಿಗೆ ಸಾರ್ವಜನಿಕರು ಎಳನೀರು, ಬಿಸ್ಕತ್ ಹಾಗೂ ಆಹಾರ ನೀಡುತ್ತಿದ್ದರು. ಸದ್ಯ ಅವರಿಗೆ ಆಶ್ರಯ ಕಲ್ಪಿಸಿದ್ದು, ಮಂಗಳವಾರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಪೋಷಕರಿಗೆ ಮಾಹಿತಿ ನೀಡಿದ್ದೇವೆ’ ಎಂದು ರಕ್ಷಣಾ ಘಟಕದ ಸಿಬ್ಬಂದಿ ತಿಳಿಸಿದರು.