ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್‌ ಸ್ಮರಣಾರ್ಥ ಗೀತ ಗಾಯನ ಸ್ಪರ್ಧೆ

Last Updated 7 ನವೆಂಬರ್ 2021, 5:45 IST
ಅಕ್ಷರ ಗಾತ್ರ

ಮಾಗಡಿ: ‘ಒಮ್ಮೆ ಭೇಟಿಯಾದವರ ಮನಸ್ಸಿನಲ್ಲಿ ಸ್ಮರಣೀಯ ನೆನಪುಗಳನ್ನು ಮೂಡಿಸುವ ವಿಶೇಷ ವ್ಯಕ್ತಿತ್ವ ನಟ ಪುನೀತ್‌ ರಾಜ್‌ಕುಮಾರ್‌ ಅವರಲ್ಲಿತ್ತು. ಕನ್ನಡ ಚಿತ್ರರಂಗದ ಅಂಗಳದಲ್ಲಿ ಆಡಿ ಬೆಳೆದ ಮಗು ಇಷ್ಟು ಬೇಗ ಮರಳಿಬಾರದ ಲೋಕಕ್ಕೆ ತೆರಳಿದ್ದು ವಿಷಾದನೀಯ’ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ಎನ್‌. ಮಲ್ಲೇಶಯ್ಯ ಹೇಳಿದರು.

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಸ್ಮರಣಾರ್ಥ ಶನಿವಾರ ಸ್ವರ ಸಂಗಮ ಸಂಸ್ಥೆಯಿಂದ ನಡೆದ ಗೀತ ಗಾಯನ ಪ್ರತಿಭಾನ್ವೇಷಣಾ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪುನೀತ್‌ ಎಲ್ಲರನ್ನೂ ಪ್ರೀತಿಸುವ ಒಬ್ಬ ಒಳ್ಳೆಯ ಮನುಷ್ಯರಾಗಿದ್ದರು. ಮಗು ಸಹಜ ಕುತೂಹಲ ಅವರಲ್ಲಿತ್ತು. ಅಕ್ಕರೆಯ ಎಲ್ಲೆ ಮೀರಿದ ವ್ಯಕ್ತಿತ್ವ ಹೊಂದಿದ್ದರು. ಪ್ರವಾಸ ಮಾಡುವಾಗ ಗ್ರಾಮಾಂತರ ಪ್ರದೇಶದಲ್ಲಿ ಕಾರು ನಿಲ್ಲಿಸಿ ಹೊಲ, ಗದ್ದೆಗಳಿಗೆ ಇಳಿದು ರೈತರು, ದನ, ಕುರಿ ಕಾಯುವವರನ್ನು ಆತ್ಮೀಯತೆಯಿಂದ ಮಾತನಾಡಿ ಸಹಾಯ ಮಾಡಿದ್ದರು ಎಂದು ಸ್ಮರಿಸಿದರು.

ರಂಗ ಕಲಾವಿದ ಕ್ಯಾತ್ಸಂದ್ರ ಶ್ರೀನಿವಾಸ್‌, ಚಿತ್ರ ಕಲಾವಿದ ಚಂದ್ರಶೇಖರ್‌, ವಯೊಲಿನ್‌ ವಾದಕ ಅಮರ್‌ನಾಥ್‌, ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷೆ ಕಲ್ಪನಾ ಶಿವಣ್ಣ, ಸಂಗೀತ ಶಿಕ್ಷಕಿಯರಾದ ವತ್ಸಲಾ ಗೋವಿಂದರಾಜನ್‌, ವಸಂತಲಕ್ಷ್ಮೀ ಸುರೇಂದ್ರನಾಥ್‌, ಸ್ವರ ಸಂಗಮದ ಮುರಳಿಕೃಷ್ಣ, ಲಾವಣಿಕಾರ ನಾಗರಾಜು, ಜ್ಯೋತಿ ನಗರದ ಧನಂಜಯ, ಜನಪದ ಕಲಾವಿದ ಜುಟ್ಟನಹಳ್ಳಿ ರವಿಕುಮಾರ್‌ ಅವರು ಪುನೀತ್‌ ಚಿತ್ರರಂಗದಲ್ಲಿ ಬಿಟ್ಟು ಹೋಗಿರುವ ನೆನಪುಗಳನ್ನು ಮೆಲುಕು ಹಾಕಿದರು.ಶಿಕ್ಷಕಿ ಗಾಯತ್ರಿ (ಪ್ರಥಮ), ವಿದ್ಯಾರ್ಥಿನಿ ಪಲ್ಲವಿ (ದ್ವಿತೀಯ), ಡಾ.ಜಗದೀಶ್‌ ನಡುವಿನಮಠ (ತೃತೀಯ) ಬೆಳ್ಳಿ ಪದಕ ಪಡೆದರು. ಮೋಕ್ಷಿತಾ, ಅಕ್ಷಯ್‌, ಅಪರ್ಣ, ರವಿಕುಮಾರ್‌, ನಾಗರತ್ನಾ, ಅರ್ಪಿತಾ, ಸುನೀತಾ (ಸಮಾಧಾನಕರ) ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT