<p><strong>ಮಾಗಡಿ</strong>: ‘ವರನಟ ಡಾ.ರಾಜ್ಕುಮಾರ್ ಎಂದರೆ ಎಲ್ಲರಿಗೂ ಅಪಾರ ಗೌರವವಿದೆ. ಹೊಸಬರಿಗೆ ಬಿಸಿ ಅಪ್ಪುಗೆ ನೀಡುತ್ತಿದ್ದ ನಟ ಪುನೀತ್ ರಾಜ್ಕುಮಾರ್ ಅವರ ಸಮಯಪಾಲನೆಯನ್ನು ನಾವೆಲ್ಲರೂ ಪಾಲಿಸೋಣ’ ಎಂದು ಮುಖಂಡ ರಾಮಕೃಷ್ಣಯ್ಯ ತಿಳಿಸಿದರು.</p>.<p>ಗುಮ್ಮಸಂದ್ರದಲ್ಲಿ ಭಾನುವಾರ ಯುವಕರ ಕ್ರೀಡಾ ಮತ್ತು ಕಲಾ ಸಂಘದಿಂದ ನಡೆದ ದಿವಂಗತ ನಟ ಪುನೀತ್ ರಾಜ್ಕುಮಾರ್ ಸ್ಮರಣೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.</p>.<p>ರಾಜ್ಕುಮಾರ್ ಅವರ ‘ಬಂಗಾರದ ಮನುಷ್ಯ’, ‘ಸತ್ಯ ಹರಿಶ್ಚಂದ್ರ’, ‘ಎರಡು ಕನಸು’ ಸಿನಿಮಾಗಳನ್ನು ನೋಡಿ ಬದುಕು ಕಟ್ಟಿಕೊಂಡೆವು. ಅವರ ನಟನಾ ಕೌಶಲವನ್ನು ಮೈಗೂಡಿಸಿಕೊಂಡಿದ್ದ ಪುನೀತ್ ಅವರ ಸಿನಿಮಾಗಳಲ್ಲಿ ರಾಜಣ್ಣ ಅವರನ್ನು ಕಾಣುತ್ತಿದ್ದೆವು ಎಂದು ಸ್ಮರಿಸಿದರು.</p>.<p>ದೇವರು ಇಷ್ಟುಬೇಗ ಬಡವರಿಗೆ ನೆರವು ನೀಡುತ್ತಿದ್ದ ಪುನೀತ್ ಅವರನ್ನು ಕರೆದುಕೊಳ್ಳಬಾರದಿತ್ತು. ಅವರು ಮಾಡುತ್ತಿದ್ದ ನಿಸ್ವಾರ್ಥ ಸೇವೆಯಲ್ಲಿ ಸಾಸಿವೆ ಕಾಳಿನಷ್ಟಾದರೂ ಮಾಡುವ ಮೂಲಕ ನಮ್ಮ ಬದುಕಿನಲ್ಲಿ ಅವರನ್ನು ಸ್ಮರಿಸಬೇಕಿದೆ ಎಂದರು.</p>.<p>ಗ್ರಾ.ಪಂ. ಸದಸ್ಯೆ ಕಲಾ ಶ್ರೀನಿವಾಸ್, ಮುಖಂಡರಾದ ಶಿವಣ್ಣ, ರಾಮಣ್ಣ, ನಾಗಣ್ಣ, ಗಂಗರೇವಣ್ಣ, ದೇವರಾಜ್, ಲಕ್ಷ್ಮಣ್ ಮಾತನಾಡಿದರು. ನಿವೃತ್ತ ಯೋಧ ಚಲುವನಾರಾಯಣ್ ಅವರನ್ನು ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳಾದ ಮುನಿರಾಜು, ರವಿಕುಮಾರ್, ಕೃಷ್ಣಮೂರ್ತಿ, ಸುರೇಶ್, ಪ್ರಕಾಶ್, ಪ್ರವೀಣ್, ರಮೇಶ್, ಕೆಂಪರಾಜು, ಪ್ರಸನ್ನ, ಚರಣ್, ರವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ</strong>: ‘ವರನಟ ಡಾ.ರಾಜ್ಕುಮಾರ್ ಎಂದರೆ ಎಲ್ಲರಿಗೂ ಅಪಾರ ಗೌರವವಿದೆ. ಹೊಸಬರಿಗೆ ಬಿಸಿ ಅಪ್ಪುಗೆ ನೀಡುತ್ತಿದ್ದ ನಟ ಪುನೀತ್ ರಾಜ್ಕುಮಾರ್ ಅವರ ಸಮಯಪಾಲನೆಯನ್ನು ನಾವೆಲ್ಲರೂ ಪಾಲಿಸೋಣ’ ಎಂದು ಮುಖಂಡ ರಾಮಕೃಷ್ಣಯ್ಯ ತಿಳಿಸಿದರು.</p>.<p>ಗುಮ್ಮಸಂದ್ರದಲ್ಲಿ ಭಾನುವಾರ ಯುವಕರ ಕ್ರೀಡಾ ಮತ್ತು ಕಲಾ ಸಂಘದಿಂದ ನಡೆದ ದಿವಂಗತ ನಟ ಪುನೀತ್ ರಾಜ್ಕುಮಾರ್ ಸ್ಮರಣೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.</p>.<p>ರಾಜ್ಕುಮಾರ್ ಅವರ ‘ಬಂಗಾರದ ಮನುಷ್ಯ’, ‘ಸತ್ಯ ಹರಿಶ್ಚಂದ್ರ’, ‘ಎರಡು ಕನಸು’ ಸಿನಿಮಾಗಳನ್ನು ನೋಡಿ ಬದುಕು ಕಟ್ಟಿಕೊಂಡೆವು. ಅವರ ನಟನಾ ಕೌಶಲವನ್ನು ಮೈಗೂಡಿಸಿಕೊಂಡಿದ್ದ ಪುನೀತ್ ಅವರ ಸಿನಿಮಾಗಳಲ್ಲಿ ರಾಜಣ್ಣ ಅವರನ್ನು ಕಾಣುತ್ತಿದ್ದೆವು ಎಂದು ಸ್ಮರಿಸಿದರು.</p>.<p>ದೇವರು ಇಷ್ಟುಬೇಗ ಬಡವರಿಗೆ ನೆರವು ನೀಡುತ್ತಿದ್ದ ಪುನೀತ್ ಅವರನ್ನು ಕರೆದುಕೊಳ್ಳಬಾರದಿತ್ತು. ಅವರು ಮಾಡುತ್ತಿದ್ದ ನಿಸ್ವಾರ್ಥ ಸೇವೆಯಲ್ಲಿ ಸಾಸಿವೆ ಕಾಳಿನಷ್ಟಾದರೂ ಮಾಡುವ ಮೂಲಕ ನಮ್ಮ ಬದುಕಿನಲ್ಲಿ ಅವರನ್ನು ಸ್ಮರಿಸಬೇಕಿದೆ ಎಂದರು.</p>.<p>ಗ್ರಾ.ಪಂ. ಸದಸ್ಯೆ ಕಲಾ ಶ್ರೀನಿವಾಸ್, ಮುಖಂಡರಾದ ಶಿವಣ್ಣ, ರಾಮಣ್ಣ, ನಾಗಣ್ಣ, ಗಂಗರೇವಣ್ಣ, ದೇವರಾಜ್, ಲಕ್ಷ್ಮಣ್ ಮಾತನಾಡಿದರು. ನಿವೃತ್ತ ಯೋಧ ಚಲುವನಾರಾಯಣ್ ಅವರನ್ನು ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳಾದ ಮುನಿರಾಜು, ರವಿಕುಮಾರ್, ಕೃಷ್ಣಮೂರ್ತಿ, ಸುರೇಶ್, ಪ್ರಕಾಶ್, ಪ್ರವೀಣ್, ರಮೇಶ್, ಕೆಂಪರಾಜು, ಪ್ರಸನ್ನ, ಚರಣ್, ರವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>