‘ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮುಂಗಾರು ಪೂರ್ವ ಬಿತ್ತನೆಗೆ ಸ್ವಲ್ಪ ಅನುಕೂಲವಾಗಲಿದೆ. ನಿತ್ಯ ಕನಿಷ್ಠ ಒಂದು ತಾಸು ಸುರಿದರೆ ನೆಲ ಚನ್ನಾಗಿ ಹದಗೊಳ್ಳಲಿದ್ದು, ಉಳುಮೆ ಮತ್ತು ಬಿತ್ತನೆ ಕಾರ್ಯಗಳಿಗೆ ಪುಷ್ಟಿ ಸಿಗಲಿದೆ. ಕಳೆದ ವರ್ಷ ಮಳೆ ಇಲ್ಲದೆ ಭೀಕರ ಬರ ಎದುರಿಸಿದ ಜಿಲ್ಲೆಗೆ ಈ ಸಲವಾದರೂ ಮಳೆರಾಯ ಕರುಣೆ ತೋರಲಿ’ ಎಂದು ಹಳ್ಳಿಮಾಳದ ರೈತ ನಿಂಗೇಗೌಡ ಹೇಳಿದರು.