ಕುದೂರು: ಮಾಗಡಿ– ಗವಿನಾಗಮಂಗಲ ಮುಖ್ಯರಸ್ತೆಯ ಕಪ್ಪನಪಾಳ್ಯ ಗ್ರಾಮದ ಬಳಿ ಇರುವ ಕೆಬಿಬಿ ಪ್ಲಾಂಟ್ ಬಳಿ ಭಾನುವಾರ ಅಪರಿಚಿತ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬನಿಗೆ ಗಾಯವಾಗಿದೆ.
ಮಾಡಬಾಳ್ ಹೋಬಳಿಯ ಯಲಚಿಕಟ್ಟೆ ಪಾಳ್ಯ ಗ್ರಾಮದ ತಿಮ್ಮಯ್ಯ ಮೃತಪಟ್ಟವರು. ಮುದುಗಿರಿ ಗೌಡ ಎಂಬುವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.