<p><strong>ಮಾಗಡಿ</strong>: ಮನೆಕಳ್ಳತನ, ಸರಗಳವು, ಜೇಬುಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ಆರು ಆರೋಪಿಗಳನ್ನು ಈಚೆಗೆ ಬಂಧಿಸಿರುವ ಮಾಗಡಿ ಪೊಲೀಸರು, ಚಿನ್ನದ ಒಡವೆ, ನಗದು, ಮೊಬೈಲ್, ಬೈಕ್ ಸೇರಿ ಒಟ್ಟು ₹ 8.60 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ತುಮಕೂರು ಜಿಲ್ಲೆಯ ಜಯಪ್ರಕಾಶ್ ನಾಯ್ಕ, ದೇವರಾಜು, ಮಹೇಶ್ ಕುಮಾರ್, ಬೆಂಗಳೂರಿನ ಅಕ್ರಮ್ ಖಾನ್ ಹಾಗೂ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಬಂಧಿತ ಆರೋಪಿಗಳು.</p>.<p>ಜೂನ್ 20ರಂದು ತಾಲ್ಲೂಕಿನ ಬ್ಯಾಲಕೆರೆ ಗ್ರಾಮದಲ್ಲಿ ಮನೆಯ ಬೀಗ ಒಡೆದು ಸುಮಾರು 55 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.</p>.<p>ತುಮಕೂರು ಜಿಲ್ಲೆಯ ಐವಾರಲಹಳ್ಳಿಯ ಜಯಪ್ರಕಾಶ್ ನಾಯ್ಕ, ದೇವರಾಜು ಹಾಗೂ ತುಮಕೂರು ನಗರ ಅರಳೇಪೇಟೆಯ ರಾಮ್ ಜ್ಯುವೆಲರ್ಸ್ ಅಂಗಡಿ ಮಾಲೀಕ ಮಹೇಶ್ ಕುಮಾರ್ ಬಂಧಿತ ಆರೋಪಿಗಳು. ಜಯಪ್ರಕಾಶ್ ಮತ್ತು ದೇವರಾಜು ಪೇಂಟಿಂಗ್ ಕೆಲಸಗಾರರು. ಬಂಧಿತರಿಂದ ₹3.85 ಲಕ್ಷ ಮೌಲ್ಯದ 55 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.</p>.<p>ಜೂನ್ 30ರಂದು ತಾಲ್ಲೂಕಿನ ಅಜ್ಜನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಮನೆ ಮುಂದೆ ಪಾತ್ರೆ ತೊಳೆಯುತ್ತಿದ್ದಾಗ ಬೈಕ್ನಲ್ಲಿ ಬಂದಿದ್ದ ಬಾಲಕರು, ಮಹಿಳೆಯ ಕೊರಳಿನಲ್ಲಿದ್ದ 42 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದರು. ಈ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ ₹2.50 ಲಕ್ಷ ಮೌಲ್ಯದ 42 ಗ್ರಾಂ ಚಿನ್ನದ ಮಾಂಗಲ್ಯ ಸರ ಹಾಗೂ ₹ 2 ಲಕ್ಷ ಮೌಲ್ಯದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.</p>.<p>ಮೇ 27ರಂದು ಮಾಗಡಿ ಬಸ್ ನಿಲ್ದಾಣದಲ್ಲಿ ಅಂಕನಹಳ್ಳಿಗ್ರಾಮದ ನಿವಾಸಿಯೊಬ್ಬರು ಬಸ್ ಹತ್ತುವಾಗ ಅವರ ಬ್ಯಾಗಿನಲ್ಲಿದ್ದ ₹ 12 ಸಾವಿರ ನಗದು ಹಾಗೂ ಮೊಬೈಲ್ ಕಳವು ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬೆಂಗಳೂರಿನ ಕೆ.ಜಿ. ಹಳ್ಳಿಯ ಅಕ್ರಮ್ ಖಾನ್ ಎಂಬಾತನನ್ನು ಬಂಧಿಸಿ, ಆತನಿಂದ ₹ 12 ಸಾವಿರ ನಗದು ಹಾಗೂ ₹ 13 ಸಾವಿರ ಮೌಲ್ಯದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.</p>.<p>ಮೂರು ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗಾಗಿ ರಾಮನಗರ ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಶೇಷ ತಂಡ ರಚಿಸಿದ್ದರು. ಬಳಿಕ ಆರೋಪಿಗಳನ್ನು ಬಂಧಿಸಿದ್ದ ತಂಡವು, ಅವರಿಂದ ಚಿನ್ನದ ಒಡವೆ, ನಗದು, ಮೊಬೈಲ್, ಬೈಕ್ ಸೇರಿ ಒಟ್ಟು ₹ 8.60 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ಮಾಗಡಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಜಿ.ವೈ. ಗಿರಿರಾಜ್, ಪಿಎಸ್ಐ ಸಿದ್ದರಾಜು, ಸಿಬ್ಬಂದಿಗಳಾದ ಎಎಸ್ಐ ಬಾಲನಾಯ್ಕ, ಬೀರಪ್ಪ, ನಾಗರಾಜು, ವೀರಭದ್ರಪ್ಪ, ಪ್ರಮೋದ, ಮುನೀಂದ್ರ ಅವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಕಾರ್ತಿರ್ ರೆಡ್ಡಿ ಮೆಚ್ಚುಗೆ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ</strong>: ಮನೆಕಳ್ಳತನ, ಸರಗಳವು, ಜೇಬುಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ಆರು ಆರೋಪಿಗಳನ್ನು ಈಚೆಗೆ ಬಂಧಿಸಿರುವ ಮಾಗಡಿ ಪೊಲೀಸರು, ಚಿನ್ನದ ಒಡವೆ, ನಗದು, ಮೊಬೈಲ್, ಬೈಕ್ ಸೇರಿ ಒಟ್ಟು ₹ 8.60 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ತುಮಕೂರು ಜಿಲ್ಲೆಯ ಜಯಪ್ರಕಾಶ್ ನಾಯ್ಕ, ದೇವರಾಜು, ಮಹೇಶ್ ಕುಮಾರ್, ಬೆಂಗಳೂರಿನ ಅಕ್ರಮ್ ಖಾನ್ ಹಾಗೂ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಬಂಧಿತ ಆರೋಪಿಗಳು.</p>.<p>ಜೂನ್ 20ರಂದು ತಾಲ್ಲೂಕಿನ ಬ್ಯಾಲಕೆರೆ ಗ್ರಾಮದಲ್ಲಿ ಮನೆಯ ಬೀಗ ಒಡೆದು ಸುಮಾರು 55 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.</p>.<p>ತುಮಕೂರು ಜಿಲ್ಲೆಯ ಐವಾರಲಹಳ್ಳಿಯ ಜಯಪ್ರಕಾಶ್ ನಾಯ್ಕ, ದೇವರಾಜು ಹಾಗೂ ತುಮಕೂರು ನಗರ ಅರಳೇಪೇಟೆಯ ರಾಮ್ ಜ್ಯುವೆಲರ್ಸ್ ಅಂಗಡಿ ಮಾಲೀಕ ಮಹೇಶ್ ಕುಮಾರ್ ಬಂಧಿತ ಆರೋಪಿಗಳು. ಜಯಪ್ರಕಾಶ್ ಮತ್ತು ದೇವರಾಜು ಪೇಂಟಿಂಗ್ ಕೆಲಸಗಾರರು. ಬಂಧಿತರಿಂದ ₹3.85 ಲಕ್ಷ ಮೌಲ್ಯದ 55 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.</p>.<p>ಜೂನ್ 30ರಂದು ತಾಲ್ಲೂಕಿನ ಅಜ್ಜನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಮನೆ ಮುಂದೆ ಪಾತ್ರೆ ತೊಳೆಯುತ್ತಿದ್ದಾಗ ಬೈಕ್ನಲ್ಲಿ ಬಂದಿದ್ದ ಬಾಲಕರು, ಮಹಿಳೆಯ ಕೊರಳಿನಲ್ಲಿದ್ದ 42 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದರು. ಈ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ ₹2.50 ಲಕ್ಷ ಮೌಲ್ಯದ 42 ಗ್ರಾಂ ಚಿನ್ನದ ಮಾಂಗಲ್ಯ ಸರ ಹಾಗೂ ₹ 2 ಲಕ್ಷ ಮೌಲ್ಯದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.</p>.<p>ಮೇ 27ರಂದು ಮಾಗಡಿ ಬಸ್ ನಿಲ್ದಾಣದಲ್ಲಿ ಅಂಕನಹಳ್ಳಿಗ್ರಾಮದ ನಿವಾಸಿಯೊಬ್ಬರು ಬಸ್ ಹತ್ತುವಾಗ ಅವರ ಬ್ಯಾಗಿನಲ್ಲಿದ್ದ ₹ 12 ಸಾವಿರ ನಗದು ಹಾಗೂ ಮೊಬೈಲ್ ಕಳವು ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬೆಂಗಳೂರಿನ ಕೆ.ಜಿ. ಹಳ್ಳಿಯ ಅಕ್ರಮ್ ಖಾನ್ ಎಂಬಾತನನ್ನು ಬಂಧಿಸಿ, ಆತನಿಂದ ₹ 12 ಸಾವಿರ ನಗದು ಹಾಗೂ ₹ 13 ಸಾವಿರ ಮೌಲ್ಯದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.</p>.<p>ಮೂರು ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗಾಗಿ ರಾಮನಗರ ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಶೇಷ ತಂಡ ರಚಿಸಿದ್ದರು. ಬಳಿಕ ಆರೋಪಿಗಳನ್ನು ಬಂಧಿಸಿದ್ದ ತಂಡವು, ಅವರಿಂದ ಚಿನ್ನದ ಒಡವೆ, ನಗದು, ಮೊಬೈಲ್, ಬೈಕ್ ಸೇರಿ ಒಟ್ಟು ₹ 8.60 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ಮಾಗಡಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಜಿ.ವೈ. ಗಿರಿರಾಜ್, ಪಿಎಸ್ಐ ಸಿದ್ದರಾಜು, ಸಿಬ್ಬಂದಿಗಳಾದ ಎಎಸ್ಐ ಬಾಲನಾಯ್ಕ, ಬೀರಪ್ಪ, ನಾಗರಾಜು, ವೀರಭದ್ರಪ್ಪ, ಪ್ರಮೋದ, ಮುನೀಂದ್ರ ಅವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಕಾರ್ತಿರ್ ರೆಡ್ಡಿ ಮೆಚ್ಚುಗೆ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>