<p><strong>ಚನ್ನಪಟ್ಟಣ:</strong> ಬೆಂಗಳೂರು–ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ ತಹಶೀಲ್ದಾರ್ ಅವರ ಅಧಿಕೃತ ಸರ್ಕಾರಿ ನಿವಾಸ ಕಳೆದ ಎಂಟು ವರ್ಷಗಳಿಂದ ಪಾಳು ಬಿದ್ದಿದ್ದು, ಕಸ, ಹಾವು ಹಲ್ಲಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.</p><p>ಸುಮಾರು 50ಕ್ಕೂ ಹೆಚ್ಚು ಹಳೆಯದಾದ ಲೋಕೋಪಯೋಗಿ ಇಲಾಖೆಗೆ ಸೇರಿರುವ ಸರ್ಕಾರಿ ನಿವಾಸವನ್ನು 2016 ರವರೆಗೆ ತಹಶೀಲ್ದಾರ್ಗಳು ಬಳಸುತ್ತಿದ್ದರು. ಆನಂತರ ಬಂದ ಯಾವುದೇ ತಹಶೀಲ್ದಾರ್ಗಳು ಈ ನಿವಾಸವನ್ನು ಬಳಸದ ಕಾರಣ ಪಾಳು ಬಿದ್ದಿದೆ.</p><p>2016ರಲ್ಲಿ ಚನ್ನಪಟ್ಟಣ ತಹಶೀಲ್ದಾರ್ ಆಗಿದ್ದ ರಮೇಶ್ ಅವರು ಈ ನಿವಾಸವನ್ನು ಬಳಸುತ್ತಿದ್ದರು. ಬೆಂಗಳೂರಿನಲ್ಲಿ ಕುಟುಂಬದ ಜತೆ ವಾಸವಿದ್ದ ರಮೇಶ್ ಅವರು ತಮ್ಮ ತಾಯಿಯನ್ನು ಈ ನಿವಾಸದಲ್ಲಿ ಇರಿಸಿದ್ದರು. 2016ರ ಜುಲೈನಲ್ಲಿ ಅವರ ತಾಯಿ ಆ ನಿವಾಸದಲ್ಲಿಯೇ ಕೊಲೆಯಾಗಿದ್ದರು. ಈ ವಿಚಾರ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಅಂದಿನಿಂದ ಈ ನಿವಾಸ ಅನಾಥವಾಗಿದೆ.</p><p>ಪಾಳುಬಿದ್ದಿರುವ ನಿವಾಸದ ಸುತ್ತಮುತ್ತ ಗಿಡಗಂಟೆಗಳು ಬೆಳೆದಿರುವ ಕಾರಣ ಹಾವು ಹಲ್ಲಿಗಳು ಸೇರಿಕೊಂಡಿವೆ. ನಿವಾಸದ ಮುಂಭಾಗದಲ್ಲಿ, ಒಳಗೆ ಕೆಲವರು ಕಸ ಹಾಕುತ್ತಿದ್ದಾರೆ. ಈ ನಿವಾಸವು ಬೆಂಗಳೂರು ಮೈಸೂರು ಹೆದ್ದಾರಿಯ ಪಕ್ಕದಲ್ಲೇ ಇರುವುದರಿಂದ ನಗರದ ಅಂದವನ್ನು ಕೆಡಿಸುತ್ತಿದೆ. ಹೆದ್ದಾರಿ ಬಳಿ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಸಂಬಂಧಪಟ್ಟವರು ಈ ನಿವಾಸವನ್ನು ಸ್ವಚ್ಛಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.</p><p><strong>ವಾಹನ ನಿಲುಗಡೆ ಸ್ಥಳ:</strong> ತಹಶೀಲ್ದಾರ್ ಅವರ ಅಧಿಕೃತ ಸರ್ಕಾರಿ ನಿವಾಸವು ಕಳೆದ ಎಂಟು ವರ್ಷಗಳಿಂದ ಪಾಳು ಬಿದ್ದಿರುವ ಕಾರಣ ಇದರ ಮುಂದಿನ ಜಾಗ ಕಾರು, ಬೈಕ್ಗಳ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ಈ ನಿವಾಸದ ಗೇಟಿಗೆ ಬೀಗ ಜಡಿದಿರುವ ಹಿನ್ನಲೆ ನಿವಾಸದ ಕಾಂಪೌಂಡ್ ಉದ್ದಕ್ಕೂ ಬೈಕ್, ಕಾರುಗಳನ್ನು ನಿಲ್ಲಿಸಲಾಗುತ್ತಿದೆ.</p><p>ಈ ಹಿಂದೆ ತಹಶೀಲ್ದಾರ್ಗಳು ಈ ನಿವಾಸದಲ್ಲಿ ವಾಸವಿದ್ದ ವೇಳೆ ಇಲ್ಲಿ ಪೊಲೀಸರನ್ನು ಕಾವಲು ಹಾಕಲಾಗುತ್ತಿತ್ತು. ಆಗ ಯಾವುದೇ ವಾಹನವನ್ನು ಗೇಟಿನ ಮುಂದೆ ನಿಲ್ಲಿಸಲು ಬಿಡುತ್ತಿರಲಿಲ್ಲ. ಈಗ ಹೇಳುವವರು ಕೇಳುವವರೆ ಇಲ್ಲದಂತಾಗಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.</p><p>ಲಕ್ಷಾಂತರ ಖರ್ಚು ಮಾಡಿ ಕಟ್ಟಿರುವ ಸರ್ಕಾರಿ ನಿವಾಸವೊಂದು ಹೀಗೆ ಪಾಳು ಬಿದ್ದಿರುವುದು<br>ಸೂಕ್ತವಲ್ಲ. ಈ ಕಟ್ಟಡವನ್ನು ಕೆಡವಿ ಇಲ್ಲಿ ಸುಸಜ್ಜಿತ ಬೇರೊಂದು ಸರ್ಕಾರಿ ಕಟ್ಟಡ ಕಟ್ಟಲಿ. ಅಥವಾ ಹೆದ್ದಾರಿಗೆ ಹೊಂದಿಕೊಂಡಿರುವ ಈ ಜಾಗದಲ್ಲಿ ವಾಣಿಜ್ಯ ಮಳಿಗೆ ಕಟ್ಟಿ ಬಾಡಿಗೆಗೆ ನೀಡಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.</p><p>ಕಳೆದ ನಾಲ್ಕು ವರ್ಷಗಳ ಹಿಂದೆ ಈ ಕಟ್ಟಡವನ್ನು ಕೆಡವಿ ಅಲ್ಲಿ ಸುಸಜ್ಜಿತ ವ್ಯಾಪಾರ ಮಳಿಗೆ ನಿರ್ಮಿಸುವ<br>ಯೋಜನೆ ರೂಪಿಸಲಾಗಿತ್ತು. ಅಂದು ಅಧಿಕಾರದಲ್ಲಿದ್ದ ಅಧಿಕಾರಿಯೊಬ್ಬರು ಈ ಪ್ರಸ್ತಾವನೆಯನ್ನು ಸರ್ಕಾರದ<br>ಮುಂದೆ ಇಡುವಲ್ಲಿ ಆಸಕ್ತಿ ತೋರದ ಕಾರಣ ಅದು ನನೆಗುದಿಗೆ ಬಿತ್ತು. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತೆ ಪ್ರಸ್ತಾವನೆ ಇಡುವ ತೀರ್ಮಾನ ಮಾಡಲಾಗಿದೆ ಎಂದು ಹೆಸರೇಳಲಿಚ್ಛಿಸದ ಲೋಕೋಪಯೋಗಿ ಇಲಾಖೆ<br>ಅಧಿಕಾರಿಯೊಬ್ಬರು ತಿಳಿಸಿದರು.</p><p><strong>ಕೊಲೆಯಾದ ನಂತರ ನಿವಾಸ ಖಾಲಿ</strong> </p><p>ತಹಶೀಲ್ದಾರ್ ರಮೇಶ್ ಅವರ ತಾಯಿ ಕೊಲೆಯಾದ ನಂತರ ಈ ನಿವಾಸಕ್ಕೆ ಯಾವ ಅಧಿಕಾರಿಯೂ ಬಾರದ ಕಾರಣ ನಿವಾಸ ಖಾಲಿ ಇದೆ. </p><p>ಮೂಲತಃ ತಾಲ್ಲೂಕಿನ ಅಮ್ಮಳ್ಳಿದೊಡ್ಡಿ ಗ್ರಾಮದವರಾದ ರಮೇಶ್ ಅವರು ಅವರ ತಾಯಿ ತಾಯಮ್ಮ ಅವರನ್ನು ತಹಶೀಲ್ದಾರ್ ನಿವಾಸದಲ್ಲಿ ಇರಿಸಿದ್ದರು. ಹಣಕಾಸಿನ ವಿಚಾರದಲ್ಲಿ ತಾಯಮ್ಮ ಅವರ ಜತೆ ವೈಮನಸ್ಸು ಬೆಳೆಸಿಕೊಂಡಿದ್ದ ಅಮ್ಮಳ್ಳಿದೊಡ್ಡಿಯ ಹೇಮಂತ್ ಕುಮಾರ್ ಹಾಗೂ ಶೋಭಾ ಅವರು ತಾಯಮ್ಮ ಅವರನ್ನು ಈ ನಿವಾಸದಲ್ಲೇ ಕೊಲೆ ಮಾಡಿಸಿದ್ದರು. ಇದಾದ ನಂತರ ಪೊಲೀಸ್ ಪರಿಶೀಲನೆ, ತನಿಖೆ ಹೆಸರಿನಲ್ಲಿ ಈ ನಿವಾಸಕ್ಕೆ ಬೀಗ ಜಡಿಯಲಾಯಿತು. </p><p>ಕೊಲೆ ಆರೋಪಿಗಳನ್ನು ಪತ್ತೆ ಮಾಡಿ ಅವರನ್ನು ಶಿಕ್ಷೆಗೆ ಗುರಿಪಡಿಸಲಾಯಿತು. ನಂತರ ಸಾಕ್ಷಿಗಳ ಕೊರೆತೆಯಿಂದ ಇಬ್ಬರೂ ಆರೋಪಿಗಳನ್ನು ಹೈಕೋರ್ಟ್ ಖುಲಾಸೆಗೊಳಿಸಿತು. ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಈ ನಿವಾಸಕ್ಕೆ ಹಿಡಿದಿರುವ ಗ್ರಹಣ ಮಾತ್ರ ಬಿಟ್ಟಿಲ್ಲ.</p><p><strong>ನಿವಾಸಕ್ಕೆ ಮುಕ್ತಿ ನೀಡಿ</strong></p><p>ಸರ್ಕಾರಿ ಕಟ್ಟಡವೊಂದನ್ನು ಈ ರೀತಿ ಪಾಳು ಬಿಡುವುದು ಸರಿಯಲ್ಲ. ಕಳೆದ ಎಂಟು ವರ್ಷಗಳಿಂದ ಪಾಳುಬಿದ್ದಿರುವ ಈ ನಿವಾಸಕ್ಕೆ ಮುಕ್ತಿ ನೀಡಬೇಕಾಗಿರುವುದು ಅಧಿಕಾರಿಗಳ ಜವಾಬ್ದಾರಿ. ಈ ಕಟ್ಟಡವನ್ನು ನವೀಕೃತಗೊಳಿಸಿ ಬಳಸಲಿ, ಇಲ್ಲವೇ ಇದನ್ನು ಕೆಡವಿ ಆಧುನಿಕ ಕಟ್ಟಡ ನಿರ್ಮಾಣ ಮಾಡಲಿ. ಈ ಜಾಗದಲ್ಲಿ ಆಧುನಿಕ ಕಟ್ಟಡ ನಿರ್ಮಾಣ ಮಾಡಿದರೆ ನಗರಕ್ಕೂ ಶೋಭೆ.</p><p>-ಜಿ. ರಾಘವೇಂದ್ರ, ಚನ್ನಪಟ್ಟಣ</p><p><strong>ಸುಸಜ್ಜಿತ ಕಟ್ಟಡ ನಿರ್ಮಿಸಿ ಬಳಸಿ</strong></p><p>ನಗರದಲ್ಲಿ ಹಲವು ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ನಗರದ ಮಧ್ಯಭಾಗದಲ್ಲಿ ಸರ್ಕಾರಿ ಜಾಗ ಇರುವಾಗ ಬಾಡಿಗೆ ಕಟ್ಟಡಕ್ಕೆ ಹಣ ಪೋಲು ಮಾಡುವ ಬದಲು ಈ ಕಟ್ಟಡವನ್ನು ಕೆಡವಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದರೆ ಜನರಿಗೆ ಸರ್ಕಾರಿ ಕಚೇರಿಗಳು ಸಮೀಪವಾಗುತ್ತವೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ.</p><p>-ಭರತ್, ಚನ್ನಪಟ್ಟಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ:</strong> ಬೆಂಗಳೂರು–ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ ತಹಶೀಲ್ದಾರ್ ಅವರ ಅಧಿಕೃತ ಸರ್ಕಾರಿ ನಿವಾಸ ಕಳೆದ ಎಂಟು ವರ್ಷಗಳಿಂದ ಪಾಳು ಬಿದ್ದಿದ್ದು, ಕಸ, ಹಾವು ಹಲ್ಲಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.</p><p>ಸುಮಾರು 50ಕ್ಕೂ ಹೆಚ್ಚು ಹಳೆಯದಾದ ಲೋಕೋಪಯೋಗಿ ಇಲಾಖೆಗೆ ಸೇರಿರುವ ಸರ್ಕಾರಿ ನಿವಾಸವನ್ನು 2016 ರವರೆಗೆ ತಹಶೀಲ್ದಾರ್ಗಳು ಬಳಸುತ್ತಿದ್ದರು. ಆನಂತರ ಬಂದ ಯಾವುದೇ ತಹಶೀಲ್ದಾರ್ಗಳು ಈ ನಿವಾಸವನ್ನು ಬಳಸದ ಕಾರಣ ಪಾಳು ಬಿದ್ದಿದೆ.</p><p>2016ರಲ್ಲಿ ಚನ್ನಪಟ್ಟಣ ತಹಶೀಲ್ದಾರ್ ಆಗಿದ್ದ ರಮೇಶ್ ಅವರು ಈ ನಿವಾಸವನ್ನು ಬಳಸುತ್ತಿದ್ದರು. ಬೆಂಗಳೂರಿನಲ್ಲಿ ಕುಟುಂಬದ ಜತೆ ವಾಸವಿದ್ದ ರಮೇಶ್ ಅವರು ತಮ್ಮ ತಾಯಿಯನ್ನು ಈ ನಿವಾಸದಲ್ಲಿ ಇರಿಸಿದ್ದರು. 2016ರ ಜುಲೈನಲ್ಲಿ ಅವರ ತಾಯಿ ಆ ನಿವಾಸದಲ್ಲಿಯೇ ಕೊಲೆಯಾಗಿದ್ದರು. ಈ ವಿಚಾರ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಅಂದಿನಿಂದ ಈ ನಿವಾಸ ಅನಾಥವಾಗಿದೆ.</p><p>ಪಾಳುಬಿದ್ದಿರುವ ನಿವಾಸದ ಸುತ್ತಮುತ್ತ ಗಿಡಗಂಟೆಗಳು ಬೆಳೆದಿರುವ ಕಾರಣ ಹಾವು ಹಲ್ಲಿಗಳು ಸೇರಿಕೊಂಡಿವೆ. ನಿವಾಸದ ಮುಂಭಾಗದಲ್ಲಿ, ಒಳಗೆ ಕೆಲವರು ಕಸ ಹಾಕುತ್ತಿದ್ದಾರೆ. ಈ ನಿವಾಸವು ಬೆಂಗಳೂರು ಮೈಸೂರು ಹೆದ್ದಾರಿಯ ಪಕ್ಕದಲ್ಲೇ ಇರುವುದರಿಂದ ನಗರದ ಅಂದವನ್ನು ಕೆಡಿಸುತ್ತಿದೆ. ಹೆದ್ದಾರಿ ಬಳಿ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಸಂಬಂಧಪಟ್ಟವರು ಈ ನಿವಾಸವನ್ನು ಸ್ವಚ್ಛಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.</p><p><strong>ವಾಹನ ನಿಲುಗಡೆ ಸ್ಥಳ:</strong> ತಹಶೀಲ್ದಾರ್ ಅವರ ಅಧಿಕೃತ ಸರ್ಕಾರಿ ನಿವಾಸವು ಕಳೆದ ಎಂಟು ವರ್ಷಗಳಿಂದ ಪಾಳು ಬಿದ್ದಿರುವ ಕಾರಣ ಇದರ ಮುಂದಿನ ಜಾಗ ಕಾರು, ಬೈಕ್ಗಳ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ಈ ನಿವಾಸದ ಗೇಟಿಗೆ ಬೀಗ ಜಡಿದಿರುವ ಹಿನ್ನಲೆ ನಿವಾಸದ ಕಾಂಪೌಂಡ್ ಉದ್ದಕ್ಕೂ ಬೈಕ್, ಕಾರುಗಳನ್ನು ನಿಲ್ಲಿಸಲಾಗುತ್ತಿದೆ.</p><p>ಈ ಹಿಂದೆ ತಹಶೀಲ್ದಾರ್ಗಳು ಈ ನಿವಾಸದಲ್ಲಿ ವಾಸವಿದ್ದ ವೇಳೆ ಇಲ್ಲಿ ಪೊಲೀಸರನ್ನು ಕಾವಲು ಹಾಕಲಾಗುತ್ತಿತ್ತು. ಆಗ ಯಾವುದೇ ವಾಹನವನ್ನು ಗೇಟಿನ ಮುಂದೆ ನಿಲ್ಲಿಸಲು ಬಿಡುತ್ತಿರಲಿಲ್ಲ. ಈಗ ಹೇಳುವವರು ಕೇಳುವವರೆ ಇಲ್ಲದಂತಾಗಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.</p><p>ಲಕ್ಷಾಂತರ ಖರ್ಚು ಮಾಡಿ ಕಟ್ಟಿರುವ ಸರ್ಕಾರಿ ನಿವಾಸವೊಂದು ಹೀಗೆ ಪಾಳು ಬಿದ್ದಿರುವುದು<br>ಸೂಕ್ತವಲ್ಲ. ಈ ಕಟ್ಟಡವನ್ನು ಕೆಡವಿ ಇಲ್ಲಿ ಸುಸಜ್ಜಿತ ಬೇರೊಂದು ಸರ್ಕಾರಿ ಕಟ್ಟಡ ಕಟ್ಟಲಿ. ಅಥವಾ ಹೆದ್ದಾರಿಗೆ ಹೊಂದಿಕೊಂಡಿರುವ ಈ ಜಾಗದಲ್ಲಿ ವಾಣಿಜ್ಯ ಮಳಿಗೆ ಕಟ್ಟಿ ಬಾಡಿಗೆಗೆ ನೀಡಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.</p><p>ಕಳೆದ ನಾಲ್ಕು ವರ್ಷಗಳ ಹಿಂದೆ ಈ ಕಟ್ಟಡವನ್ನು ಕೆಡವಿ ಅಲ್ಲಿ ಸುಸಜ್ಜಿತ ವ್ಯಾಪಾರ ಮಳಿಗೆ ನಿರ್ಮಿಸುವ<br>ಯೋಜನೆ ರೂಪಿಸಲಾಗಿತ್ತು. ಅಂದು ಅಧಿಕಾರದಲ್ಲಿದ್ದ ಅಧಿಕಾರಿಯೊಬ್ಬರು ಈ ಪ್ರಸ್ತಾವನೆಯನ್ನು ಸರ್ಕಾರದ<br>ಮುಂದೆ ಇಡುವಲ್ಲಿ ಆಸಕ್ತಿ ತೋರದ ಕಾರಣ ಅದು ನನೆಗುದಿಗೆ ಬಿತ್ತು. ಮುಂದಿನ ದಿನಗಳಲ್ಲಿ ಈ ಬಗ್ಗೆ ಮತ್ತೆ ಪ್ರಸ್ತಾವನೆ ಇಡುವ ತೀರ್ಮಾನ ಮಾಡಲಾಗಿದೆ ಎಂದು ಹೆಸರೇಳಲಿಚ್ಛಿಸದ ಲೋಕೋಪಯೋಗಿ ಇಲಾಖೆ<br>ಅಧಿಕಾರಿಯೊಬ್ಬರು ತಿಳಿಸಿದರು.</p><p><strong>ಕೊಲೆಯಾದ ನಂತರ ನಿವಾಸ ಖಾಲಿ</strong> </p><p>ತಹಶೀಲ್ದಾರ್ ರಮೇಶ್ ಅವರ ತಾಯಿ ಕೊಲೆಯಾದ ನಂತರ ಈ ನಿವಾಸಕ್ಕೆ ಯಾವ ಅಧಿಕಾರಿಯೂ ಬಾರದ ಕಾರಣ ನಿವಾಸ ಖಾಲಿ ಇದೆ. </p><p>ಮೂಲತಃ ತಾಲ್ಲೂಕಿನ ಅಮ್ಮಳ್ಳಿದೊಡ್ಡಿ ಗ್ರಾಮದವರಾದ ರಮೇಶ್ ಅವರು ಅವರ ತಾಯಿ ತಾಯಮ್ಮ ಅವರನ್ನು ತಹಶೀಲ್ದಾರ್ ನಿವಾಸದಲ್ಲಿ ಇರಿಸಿದ್ದರು. ಹಣಕಾಸಿನ ವಿಚಾರದಲ್ಲಿ ತಾಯಮ್ಮ ಅವರ ಜತೆ ವೈಮನಸ್ಸು ಬೆಳೆಸಿಕೊಂಡಿದ್ದ ಅಮ್ಮಳ್ಳಿದೊಡ್ಡಿಯ ಹೇಮಂತ್ ಕುಮಾರ್ ಹಾಗೂ ಶೋಭಾ ಅವರು ತಾಯಮ್ಮ ಅವರನ್ನು ಈ ನಿವಾಸದಲ್ಲೇ ಕೊಲೆ ಮಾಡಿಸಿದ್ದರು. ಇದಾದ ನಂತರ ಪೊಲೀಸ್ ಪರಿಶೀಲನೆ, ತನಿಖೆ ಹೆಸರಿನಲ್ಲಿ ಈ ನಿವಾಸಕ್ಕೆ ಬೀಗ ಜಡಿಯಲಾಯಿತು. </p><p>ಕೊಲೆ ಆರೋಪಿಗಳನ್ನು ಪತ್ತೆ ಮಾಡಿ ಅವರನ್ನು ಶಿಕ್ಷೆಗೆ ಗುರಿಪಡಿಸಲಾಯಿತು. ನಂತರ ಸಾಕ್ಷಿಗಳ ಕೊರೆತೆಯಿಂದ ಇಬ್ಬರೂ ಆರೋಪಿಗಳನ್ನು ಹೈಕೋರ್ಟ್ ಖುಲಾಸೆಗೊಳಿಸಿತು. ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಈ ನಿವಾಸಕ್ಕೆ ಹಿಡಿದಿರುವ ಗ್ರಹಣ ಮಾತ್ರ ಬಿಟ್ಟಿಲ್ಲ.</p><p><strong>ನಿವಾಸಕ್ಕೆ ಮುಕ್ತಿ ನೀಡಿ</strong></p><p>ಸರ್ಕಾರಿ ಕಟ್ಟಡವೊಂದನ್ನು ಈ ರೀತಿ ಪಾಳು ಬಿಡುವುದು ಸರಿಯಲ್ಲ. ಕಳೆದ ಎಂಟು ವರ್ಷಗಳಿಂದ ಪಾಳುಬಿದ್ದಿರುವ ಈ ನಿವಾಸಕ್ಕೆ ಮುಕ್ತಿ ನೀಡಬೇಕಾಗಿರುವುದು ಅಧಿಕಾರಿಗಳ ಜವಾಬ್ದಾರಿ. ಈ ಕಟ್ಟಡವನ್ನು ನವೀಕೃತಗೊಳಿಸಿ ಬಳಸಲಿ, ಇಲ್ಲವೇ ಇದನ್ನು ಕೆಡವಿ ಆಧುನಿಕ ಕಟ್ಟಡ ನಿರ್ಮಾಣ ಮಾಡಲಿ. ಈ ಜಾಗದಲ್ಲಿ ಆಧುನಿಕ ಕಟ್ಟಡ ನಿರ್ಮಾಣ ಮಾಡಿದರೆ ನಗರಕ್ಕೂ ಶೋಭೆ.</p><p>-ಜಿ. ರಾಘವೇಂದ್ರ, ಚನ್ನಪಟ್ಟಣ</p><p><strong>ಸುಸಜ್ಜಿತ ಕಟ್ಟಡ ನಿರ್ಮಿಸಿ ಬಳಸಿ</strong></p><p>ನಗರದಲ್ಲಿ ಹಲವು ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ನಗರದ ಮಧ್ಯಭಾಗದಲ್ಲಿ ಸರ್ಕಾರಿ ಜಾಗ ಇರುವಾಗ ಬಾಡಿಗೆ ಕಟ್ಟಡಕ್ಕೆ ಹಣ ಪೋಲು ಮಾಡುವ ಬದಲು ಈ ಕಟ್ಟಡವನ್ನು ಕೆಡವಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದರೆ ಜನರಿಗೆ ಸರ್ಕಾರಿ ಕಚೇರಿಗಳು ಸಮೀಪವಾಗುತ್ತವೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ.</p><p>-ಭರತ್, ಚನ್ನಪಟ್ಟಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>