ರಾಮನಗರ: ಜಿಲ್ಲೆಯ ಶೇಷಗಿರಿ ಟೋಲ್ನಲ್ಲಿ ಭಾನುವಾರ ರಾತ್ರಿ ಟೋಲ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಕೊಲೆಯಾಗಿದೆ. ತಾರವೆರೆಕೆರೆಯ ಸಿಕ್ಕೆಪಾಳ್ಯದ ಪವನ್ ನಾಯಕ್ (30) ಕೊಲೆಯಾದ ಯುವಕ.
ಬೆಂಗಳೂರು ಮೂಲದ ಯುವಕರ ಗುಂಪೊಂದು ಟೋಲ್ ಪಾವತಿಗೆ ಸಂಬಂಧಿಸಿದಂತೆ, ಪವನ್ ಅವರೊಂದಿಗೆ ಜಗಳವಾಡಿದೆ. ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಬಿಡದಿ ಠಾಣೆ ಪೊಲೀಸರು ತಿಳಿಸಿದ್ದಾರೆ.