<h2><strong>ಕನಕಪುರ: ಪಡಿತರ ಕಾರ್ಡ್ನಲ್ಲಿ ಆಗಿರುವ ಲೋಪದೋಷ ಸರಿಪಡಿಸಲು ಮತ್ತು ಮೃತಪಟ್ಟವರ ಹೆಸರನ್ನು ತೆಗಿಸಲು ಆಹಾರ ಇಲಾಖೆಗೆ ಬಂದ ಜನರಿಗೆ ಕೆಲಸ ಮಾಡಿಕೊಡುವುದನ್ನು ಬಿಟ್ಟು ಕೆಲಸವನ್ನೇ ಸ್ಥಗಿತಗೊಳಿಸಿದ ಘಟನೆ ಕನಕಪುರ ಆಹಾರ ಇಲಾಖೆಯಲ್ಲಿ ಬುಧವಾರ ನಡೆಯಿತು. </strong></h2>.<h2><strong>ಸರ್ಕಾರವು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿರುವುದರಿಂದ ತಾಲ್ಲೂಕಿನ ಜನತೆ ರೇಷನ್ ಕಾರ್ಡ್ನಲ್ಲಿ ತಮ್ಮ ಹೆಸರು ಕೈ ಬಿಟ್ಟಿದ್ದರೆ ಸೇರಿಸುವುದು ಮತ್ತು ಕುಟುಂಬದ ಮುಖ್ಯಸ್ಥೆ ಮೃತಪಟ್ಟಿದ್ದರೆ ಅವರ ಹೆಸರನ್ನು ಡಿಲೀಟ್ ಮಾಡಿಸಲು ಆಹಾರ ಇಲಾಖೆಗೆ ಬರುತ್ತಿದ್ದಾರೆ. </strong></h2>.<h2><strong>ಕಚೇರಿಗೆ ಬಂದ ಜನರಿಗೆ ಸರಿಯಾದ ಮಾಹಿತಿ ನೀಡಿ ಅವರಿಂದ ಅರ್ಜಿ ಸ್ವೀಕರಿಸಬೇಕಾದ ಆಹಾರ ಇಲಾಖೆ ಇನ್ಸ್ಪೆಕ್ಟರ್ ಮನೋಹರ್ ಕಚೇರಿಯಲ್ಲಿ ಕಂಪ್ಯೂಟರ್ ಆಪ್ ಮಾಡಿಸಿ ಕೆಲಸವನ್ನೇ ಸ್ಥಗಿತಗೊಳಿಸಿದ್ದಾರೆ. </strong></h2>.<h2><strong>ಕೆಲಸ ಪ್ರಾರಂಭಿಸುವಂತೆ ಮನವಿ ಮಾಡಿದರೂ ಕೇಳದ ಅವರು ಗಂಟೆಗಟ್ಟಲೆ ಕೆಲಸ ಪ್ರಾರಂಭಿಸಿದೆ ಮೊಂಡುತನ ಪ್ರದರ್ಶಿಸಿದ್ದಾರೆ. </strong></h2>.<h2><strong>ಸಾಲಿನಲ್ಲಿ ನಿಂತಿದ್ದವರು ಮೊದಲೆ ಸರ್ವರ್ ಸಮಸ್ಯೆ ಎಂದು ಹೇಳುತ್ತಿದ್ದೀರಿ. ಈಗ ನೀವೇ ಕೆಲಸ ನಿಲ್ಲಿಸಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇಲ್ಲಿ ಅಧಿಕಾರಿ ನಾನಾ, ನೀನಾ ಎಂದು ಮನೋಹರ್ ಗದರಿದ್ದಾರೆ. ಕೊನೆಗೆ ಎಲ್ಲರೂ ಕಚೇರಿಯಿಂದ ಹೊರಗಡೆ ನಿಂತರು. <br></strong></h2>.<h2><strong>ಕೊನೆಗೆ ಸಾಲಿನಲ್ಲಿ ನಿಂತಿದ್ದ ಜನರಿಂದ ಅರ್ಜಿ ಪಡೆದು ಎಲ್ಲರನ್ನು ಕಳುಹಿಸಿದ್ದಾರೆ. ತಾಲ್ಲೂಕಿನ ಗಡಿ ಭಾಗದಿಂದ ಬಂದಿದ್ದ ಜನರು ಅರ್ಜಿ ಕೊಟ್ಟು ಊರಿಗೆ ವಾಪಸ್ಸಾದರು.</strong></h2>.<h2><strong>ಟೋಕನ್ ಕೊಟ್ಟರೆ ಬಂದು ಅರ್ಜಿ ಕೊಟ್ಟು ಕೆಲಸ ಮಾಡಿಕೊಳ್ಳುತ್ತೇವೆ. ಸರಿಯಾದ ಮಾಹಿತಿ ನೀಡಿದೆ ಅಧಿಕಾರಿ ತೊಂದರೆ ಕೊಡುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ಗಮನ ಹರಿಸಿ ಸಾರ್ವಜನಿಕರಿಗೆ ಸ್ಪಂದಿಸಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ. </strong></h2>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2><strong>ಕನಕಪುರ: ಪಡಿತರ ಕಾರ್ಡ್ನಲ್ಲಿ ಆಗಿರುವ ಲೋಪದೋಷ ಸರಿಪಡಿಸಲು ಮತ್ತು ಮೃತಪಟ್ಟವರ ಹೆಸರನ್ನು ತೆಗಿಸಲು ಆಹಾರ ಇಲಾಖೆಗೆ ಬಂದ ಜನರಿಗೆ ಕೆಲಸ ಮಾಡಿಕೊಡುವುದನ್ನು ಬಿಟ್ಟು ಕೆಲಸವನ್ನೇ ಸ್ಥಗಿತಗೊಳಿಸಿದ ಘಟನೆ ಕನಕಪುರ ಆಹಾರ ಇಲಾಖೆಯಲ್ಲಿ ಬುಧವಾರ ನಡೆಯಿತು. </strong></h2>.<h2><strong>ಸರ್ಕಾರವು ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿರುವುದರಿಂದ ತಾಲ್ಲೂಕಿನ ಜನತೆ ರೇಷನ್ ಕಾರ್ಡ್ನಲ್ಲಿ ತಮ್ಮ ಹೆಸರು ಕೈ ಬಿಟ್ಟಿದ್ದರೆ ಸೇರಿಸುವುದು ಮತ್ತು ಕುಟುಂಬದ ಮುಖ್ಯಸ್ಥೆ ಮೃತಪಟ್ಟಿದ್ದರೆ ಅವರ ಹೆಸರನ್ನು ಡಿಲೀಟ್ ಮಾಡಿಸಲು ಆಹಾರ ಇಲಾಖೆಗೆ ಬರುತ್ತಿದ್ದಾರೆ. </strong></h2>.<h2><strong>ಕಚೇರಿಗೆ ಬಂದ ಜನರಿಗೆ ಸರಿಯಾದ ಮಾಹಿತಿ ನೀಡಿ ಅವರಿಂದ ಅರ್ಜಿ ಸ್ವೀಕರಿಸಬೇಕಾದ ಆಹಾರ ಇಲಾಖೆ ಇನ್ಸ್ಪೆಕ್ಟರ್ ಮನೋಹರ್ ಕಚೇರಿಯಲ್ಲಿ ಕಂಪ್ಯೂಟರ್ ಆಪ್ ಮಾಡಿಸಿ ಕೆಲಸವನ್ನೇ ಸ್ಥಗಿತಗೊಳಿಸಿದ್ದಾರೆ. </strong></h2>.<h2><strong>ಕೆಲಸ ಪ್ರಾರಂಭಿಸುವಂತೆ ಮನವಿ ಮಾಡಿದರೂ ಕೇಳದ ಅವರು ಗಂಟೆಗಟ್ಟಲೆ ಕೆಲಸ ಪ್ರಾರಂಭಿಸಿದೆ ಮೊಂಡುತನ ಪ್ರದರ್ಶಿಸಿದ್ದಾರೆ. </strong></h2>.<h2><strong>ಸಾಲಿನಲ್ಲಿ ನಿಂತಿದ್ದವರು ಮೊದಲೆ ಸರ್ವರ್ ಸಮಸ್ಯೆ ಎಂದು ಹೇಳುತ್ತಿದ್ದೀರಿ. ಈಗ ನೀವೇ ಕೆಲಸ ನಿಲ್ಲಿಸಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇಲ್ಲಿ ಅಧಿಕಾರಿ ನಾನಾ, ನೀನಾ ಎಂದು ಮನೋಹರ್ ಗದರಿದ್ದಾರೆ. ಕೊನೆಗೆ ಎಲ್ಲರೂ ಕಚೇರಿಯಿಂದ ಹೊರಗಡೆ ನಿಂತರು. <br></strong></h2>.<h2><strong>ಕೊನೆಗೆ ಸಾಲಿನಲ್ಲಿ ನಿಂತಿದ್ದ ಜನರಿಂದ ಅರ್ಜಿ ಪಡೆದು ಎಲ್ಲರನ್ನು ಕಳುಹಿಸಿದ್ದಾರೆ. ತಾಲ್ಲೂಕಿನ ಗಡಿ ಭಾಗದಿಂದ ಬಂದಿದ್ದ ಜನರು ಅರ್ಜಿ ಕೊಟ್ಟು ಊರಿಗೆ ವಾಪಸ್ಸಾದರು.</strong></h2>.<h2><strong>ಟೋಕನ್ ಕೊಟ್ಟರೆ ಬಂದು ಅರ್ಜಿ ಕೊಟ್ಟು ಕೆಲಸ ಮಾಡಿಕೊಳ್ಳುತ್ತೇವೆ. ಸರಿಯಾದ ಮಾಹಿತಿ ನೀಡಿದೆ ಅಧಿಕಾರಿ ತೊಂದರೆ ಕೊಡುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ಗಮನ ಹರಿಸಿ ಸಾರ್ವಜನಿಕರಿಗೆ ಸ್ಪಂದಿಸಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ. </strong></h2>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>