ಅಲ್ಪಪ್ರಮಾಣದಲ್ಲಿ ರೇಷ್ಮೆ ಸಸಿ ಬೆಳೆಸಿರುವುದನ್ನು ಮಾತ್ರ ನೋಡಬಹುದು. ಆದರೆ, ಕಚೇರಿ ಆವರಣ ಸಾರ್ವಜನಿಕರ ವಾಹನಗಳ ತಂಗುದಾಣವಾಗಿ ಮಾರ್ಪಟ್ಟಿದೆ. ಇಲ್ಲಿ ರೇಷ್ಮೆ ಕೃಷಿಯ ಅಭಿವೃದ್ಧಿಗೆ ಅವಕಾಶವಿದೆ. ಆದರೆ, ರೇಷ್ಮೆ ತೋಟ ಹೊರತುಪಡಿಸಿ ಇನ್ನಾವುದೇ ಅಭಿವೃದ್ಧಿಯು ಈ ಕೇಂದ್ರದಿಂದ ಕಾಣುತ್ತಿಲ್ಲ ಎಂದು ರೈತ ಸಿದ್ದಲಿಂಗಪ್ಪ ದೂರುತ್ತಾರೆ.