ಮಠಕ್ಕೆ ಬೆಂಬಲವಾಗಿ ನಿಂತವರು: ಮಠದ ಸಿದ್ದಲಿಂಗಸ್ವಾಮಿ, ಫಲಹಾರಸ್ವಾಮಿ, ಸದಾಶಿಸ್ವಾಮಿ, ಉಪಹಾರಸ್ವಾಮಿ, ಬಸವರಾಜಸ್ವಾಮಿ, ಸಿದ್ದಲಿಂಗಸ್ವಾಮಿ, ಶಂಕರಸ್ವಾಮಿ ಶೈವ ಪರಂಪರೆ ಉಳಿಸಿ ಬೆಳೆಸಿದ್ದಾರೆ. ಮಠದ ಯಶಸ್ಸಿಗೆ ಶ್ರಮಿಸಿದ್ದಾರೆ. ಗುಡೇಮಾರನಹಳ್ಳಿ ಜಗಣ್ಣಯ್ಯಮಠದ ಭೂಮಿ ವ್ಯಾಜ್ಯದಲ್ಲಿ ಸಿಲುಕಿದ್ದಾಗ ಜಡೇದೇವರ ಮಠದ ಬಸವರಾಜ ಸ್ವಾಮೀಜಿ ಅಲ್ಲಿನ ಗುರುಗಳಿಗೆ ಬೆಂಬಲವಾಗಿ ನಿಂತು ಹಳೆ ಮಠ ಉಳಿಸಲು ಶ್ರಮಿಸಿದ್ದಾರೆ.