ಕನಕಪುರ: ತಹಶೀಲ್ದಾರ್ ವಿ.ಆರ್. ವಿಶ್ವನಾಥ್ ನೇತೃತ್ವದ ತಂಡ ಶನಿವಾರ ಬೆಳಿಗ್ಗೆಯೇ ರಸ್ತೆಗೆ ಇಳಿದು ಪರಿಶೀಲನೆ ನಡೆಸಿತು.
ಅಧಿಕಾರಿಗಳ ತಂಡ ಎಪಿಎಂಸಿ ಮಾರುಕಟ್ಟೆ, ರಿಲಯನ್ಸ್ ಮಾಲ್ಗೆ ಭೇಟಿ ನೀಡಿ ಜನರು ಗುಂಪು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಲ್ಲಿನ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚಿಸಿತು.
ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿ ಮಾಡುವ ಸಂದರ್ಭದಲ್ಲಿ ನಡುವೆ ಅಂತರ ಕಾಯ್ದುಗೊಳ್ಳಬೇಕೆಂದು ನಾಗರಿಕರಿಗೆ ತಿಳಿವಳಿಕೆ ಮೂಡಿಸಿತು. ಸೋಂಕು ತಡೆಗೆ ಎಲ್ಲರೂ ಅಧಿಕಾರಿಗಳೊಂದಿಗೆ ಸಹಕಾರ ನೀಡಬೇಕು. ಇಷ್ಟವಾದರೆ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ಅರಿವು ಮೂಡಿಸಿತು.