ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುವ ಒತ್ತಡದಿಂದ ಪಾರಾಗಲು ತಂತ್ರ: ಬಾಲಕನ ‘ಕಿಡ್ನ್ಯಾಪ್‌’ ನಾಟಕ!

ತಿರುಪತಿ ಲಾಡ್ಜ್‌ನಲ್ಲಿ ತಂಗಿದ್ದ ಬಾಲಕ
Last Updated 9 ನವೆಂಬರ್ 2020, 2:07 IST
ಅಕ್ಷರ ಗಾತ್ರ

ರಾಮನಗರ: ಓದುವಂತೆ ಒತ್ತಡ ಹೇರಿದ್ದ ಪೋಷಕರನ್ನು ಬೆದರಿಸುವ ಸಲುವಾಗಿ ತಾನೇ ಅಪಹರಣಗೊಂಡಂತೆ ನಾಟಕ ಆಡಿದ್ದ ಬಾಲಕನನ್ನು ಕನಕಪುರ ಪೊಲೀಸರು ಪತ್ತೆ‌ ಹಚ್ಚಿ, ತಿರುಪತಿಯಿಂದ ವಾಪಸ್ ಕರೆ ತಂದಿದ್ದಾರೆ.

ಸದ್ಯ ಕನಕಪುರದಲ್ಲಿ ವಾಸವಿರುವ, ತಮಿಳುನಾಡು ಮೂಲದ ಬಟ್ಟೆ ವ್ಯಾಪಾರಿಯೊಬ್ಬರ 16 ವರ್ಷದ ಪುತ್ರ ಕಳೆದ ಶುಕ್ರವಾರ ಸೈಬರ್ ಕೇಂದ್ರಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ. ಅದಾದ ಬಳಿಕ‌ ಆತ ನಾಪತ್ತೆಯಾಗಿದ್ದ.

ಬಾಲಕನನ್ನು ಶೌಚಾಲಯವೊಂದರಲ್ಲಿ ಕಟ್ಟಿ ಹಾಕಿದ್ದ ಚಿತ್ರಗಳನ್ನು ಬಾಲಕನ ನೆರೆಮನೆಯವರ ವಾಟ್ಸ್‌ಆ್ಯಪ್‌ಗೆ ಕಳಿಸ
ಲಾಗಿತ್ತು. ₹ 5 ಲಕ್ಷಕ್ಕೆ ಬೇಡಿಕೆ‌ ಇಡಲಾಗಿತ್ತು. ಇದರಿಂದ ಆತಂಕಕ್ಕೆ ಒಳಗಾದ ಪೋಷಕರು ಕನಕಪುರ ಟೌನ್ ಠಾಣೆಯಲ್ಲಿ ದೂರು‌ ನೀಡಿದ್ದರು.

ವಾಟ್ಸ್‌ ಆ್ಯಪ್‌ ಚಿತ್ರಗಳ ಜಾಡು ಹಿಡಿದು ಹೊರಟ ಪೊಲೀಸರಿಗೆ ಅಚ್ಚರಿ ಕಾದಿತ್ತು. ಬಾಲಕನೇ ತನ್ನ ಕಿಡ್ನಾಪ್ ಆದಂತೆ ನಾಟಕ‌ ಆಡಿದ್ದು, ಸ್ನೇಹಿತರ ನೆರವಿನಿಂದ ಫೋಟೊ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಸಂಗತಿ ಬೆಳಕಿಗೆ ಬಂದಿತು!

ತಿರುಪತಿಗೆ ತೆರಳಿ ಅಲ್ಲಿನ ಹೋಟೆ‌ಲ್‌ ಒಂದರಲ್ಲಿ ಉಳಿದುಕೊಂಡಿದ್ದ ಈತನನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಲ್ಲಿಂದ ಬಾಲಕನನ್ನು ಕರೆತಂದಿರುವ ಕನಕಪುರ ಪೊಲೀಸರು, ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT