ಚನ್ನಪಟ್ಟಣ: ಇತಿಹಾಸ ಪ್ರಸಿದ್ಧ ತಾಲ್ಲೂಕಿನ ಗುಡಿಸರಗೂರು ಶ್ರೀ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ವೇಳೆ ₹2.34 ಲಕ್ಷ ಹುಂಡಿ ಹಣ ಸಂಗ್ರಹವಾಗಿದೆ.
ತಹಶೀಲ್ದಾರ್ ಸುದರ್ಶನ್ ಅವರ ಮಾರ್ಗದರ್ಶನದಲ್ಲಿ ಸಾರ್ವಜನಿಕರ ಎದುರು ಹುಂಡಿಯನ್ನು ತೆರೆದು ಸಂಗ್ರಹವಾಗಿರುವ ಹಣವನ್ನು ಗುರುವಾರ ಎಣಿಸಲಾಯಿತು. ಎಣಿಸಿದ ಬಳಿಕ ಸರ್ಕಾರದ ಖಜಾನೆಗೆ ನೀಡಲಾಯಿತು.