<p><strong>ಚನ್ನಪಟ್ಟಣ:</strong> ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದ ಕಾಡನಕುಪ್ಪೆ ಗ್ರಾಮದ ಬಳಿ ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಜ್ಞೆತಪ್ಪಿ ಸೆರೆ ಸಿಕ್ಕಿದ್ದ ಒಂಟಿ ಸಲಗವೊಂದು ಕೊನೆಕ್ಷಣದಲ್ಲಿ ಮತ್ತೆ ಎಚ್ಚರಗೊಂಡು ಕಾಡಿಗೆ ಪರಾರಿಯಾಗಿದೆ.</p>.<p>ತಾಲ್ಲೂಕಿನಲ್ಲಿ ರೈತರಿಗೆ ಹಾವಳಿ ನೀಡುತ್ತಿದ್ದ ಎರಡು ಪುಂಡಾನೆಗಳನ್ನು ಸಾಕಾನೆಗಳ ಮೂಲಕ ಸೆರೆ ಹಿಡಿಯಲು ಮುಂದಾಗಿರುವ ಅರಣ್ಯ ಇಲಾಖೆ ಕಾರ್ಯಪಡೆಯ ತಂಡ, ಈಗಾಗಲೇ ತಾಲ್ಲೂಕಿನ ಬಿ.ವಿ.ಹಳ್ಳಿ ಬಳಿಯ ಅರಣ್ಯದಲ್ಲಿ ಒಂದು ಪುಂಡಾನೆಯನ್ನು ಸೆರೆ ಹಿಡಿದಿದೆ.</p>.<p>ಮತ್ತೊಂದು ಪುಂಡಾನೆಯ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದ ತಂಡಕ್ಕೆ ಬುಧವಾರ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಪುಂಡಾನೆ ಸಿಕ್ಕಿತ್ತು. ಅದಕ್ಕೆ ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಿ ಪ್ರಜ್ಞೆ ತಪ್ಪಿಸಲಾಗಿತ್ತು.</p>.<p>ಹತ್ತು ನಿಮಿಷ ಅರಣ್ಯದಲ್ಲಿ ತಿರುಗಾಡಿ ಕೆಳಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಆನೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಗ್ಗ, ಸರಪಳಿಯಿಂದ ಬಂಧಿಸಲು ಮುಂದಾಗಿದೆ. ಆದರೆ, ಈ ವೇಳೆ ಆನೆಗೆ ಪ್ರಜ್ಞೆ ಬಂದು ದಿಢೀರನೆ ಮೇಲೆದ್ದು ಕಾಡಿನಲ್ಲಿ ಪರಾರಿಯಾಯಿತು ಎಂದು ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.</p>.<p>ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದ ಪುಂಡಾನೆಯ ಸುತ್ತಮುತ್ತ ಇಲಾಖೆಯ ಸಿಬ್ಬಂದಿ ನಿಂತಿದ್ದಾಗಲೇ ಅದು ಎಚ್ಚರಗೊಂಡಿದೆ. ಈ ವೇಳೆ ಗಾಬರಿಗೊಂಡ ಸಿಬ್ಬಂದಿ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ದೂರ ಓಡಿದ್ದಾರೆ. ಸ್ಥಳದಲ್ಲಿ 5 ಸಾಕಾನೆಗಳು ಇದ್ದ ಕಾರಣ ಕಾಡಾನೆ ಭಯಗೊಂಡು ಅರಣ್ಯ ಪ್ರದೇಶದ ಒಳಗೆಓಡಿಹೋಗಿದೆ.</p>.<p>ಇಲ್ಲದಿದ್ದರೆ ಅದು ಸಿಬ್ಬಂದಿಯ ಮೇಲೆ ದಾಳಿ ಮಾಡುವ ಸಾಧ್ಯತೆ ಇತ್ತು. ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳುತಿಳಿಸಿದ್ದಾರೆ.</p>.<p>ಸರಿಯಾದ ಪ್ರಮಾಣದ ಅರೆವಳಿಕೆ ಮದ್ದು ಅದರ ದೇಹಕ್ಕೆ ಸೇರದೆ ಇರುವುದೇ, ಅದು ಎಚ್ಚರಗೊಳ್ಳಲು ಕಾರಣವಾಗಿದೆ. ಮದ್ದಿನ ಪ್ರಮಾಣದ ಅಂದಾಜು ಸರಿಯಾಗಿ ಸಿಗದ ಕಾರಣ ಕಾಡಾನೆಗೆ ಬೇಗ ಎಚ್ಚರವಾಗಿದೆ. ಈ ಕಾಡಾನೆಯನ್ನು ಹಿಡಿಯಲು ಗುರುವಾರ ಮತ್ತೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ:</strong> ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದ ಕಾಡನಕುಪ್ಪೆ ಗ್ರಾಮದ ಬಳಿ ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಜ್ಞೆತಪ್ಪಿ ಸೆರೆ ಸಿಕ್ಕಿದ್ದ ಒಂಟಿ ಸಲಗವೊಂದು ಕೊನೆಕ್ಷಣದಲ್ಲಿ ಮತ್ತೆ ಎಚ್ಚರಗೊಂಡು ಕಾಡಿಗೆ ಪರಾರಿಯಾಗಿದೆ.</p>.<p>ತಾಲ್ಲೂಕಿನಲ್ಲಿ ರೈತರಿಗೆ ಹಾವಳಿ ನೀಡುತ್ತಿದ್ದ ಎರಡು ಪುಂಡಾನೆಗಳನ್ನು ಸಾಕಾನೆಗಳ ಮೂಲಕ ಸೆರೆ ಹಿಡಿಯಲು ಮುಂದಾಗಿರುವ ಅರಣ್ಯ ಇಲಾಖೆ ಕಾರ್ಯಪಡೆಯ ತಂಡ, ಈಗಾಗಲೇ ತಾಲ್ಲೂಕಿನ ಬಿ.ವಿ.ಹಳ್ಳಿ ಬಳಿಯ ಅರಣ್ಯದಲ್ಲಿ ಒಂದು ಪುಂಡಾನೆಯನ್ನು ಸೆರೆ ಹಿಡಿದಿದೆ.</p>.<p>ಮತ್ತೊಂದು ಪುಂಡಾನೆಯ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದ ತಂಡಕ್ಕೆ ಬುಧವಾರ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಪುಂಡಾನೆ ಸಿಕ್ಕಿತ್ತು. ಅದಕ್ಕೆ ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಿ ಪ್ರಜ್ಞೆ ತಪ್ಪಿಸಲಾಗಿತ್ತು.</p>.<p>ಹತ್ತು ನಿಮಿಷ ಅರಣ್ಯದಲ್ಲಿ ತಿರುಗಾಡಿ ಕೆಳಗೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಆನೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಗ್ಗ, ಸರಪಳಿಯಿಂದ ಬಂಧಿಸಲು ಮುಂದಾಗಿದೆ. ಆದರೆ, ಈ ವೇಳೆ ಆನೆಗೆ ಪ್ರಜ್ಞೆ ಬಂದು ದಿಢೀರನೆ ಮೇಲೆದ್ದು ಕಾಡಿನಲ್ಲಿ ಪರಾರಿಯಾಯಿತು ಎಂದು ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.</p>.<p>ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದ ಪುಂಡಾನೆಯ ಸುತ್ತಮುತ್ತ ಇಲಾಖೆಯ ಸಿಬ್ಬಂದಿ ನಿಂತಿದ್ದಾಗಲೇ ಅದು ಎಚ್ಚರಗೊಂಡಿದೆ. ಈ ವೇಳೆ ಗಾಬರಿಗೊಂಡ ಸಿಬ್ಬಂದಿ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ದೂರ ಓಡಿದ್ದಾರೆ. ಸ್ಥಳದಲ್ಲಿ 5 ಸಾಕಾನೆಗಳು ಇದ್ದ ಕಾರಣ ಕಾಡಾನೆ ಭಯಗೊಂಡು ಅರಣ್ಯ ಪ್ರದೇಶದ ಒಳಗೆಓಡಿಹೋಗಿದೆ.</p>.<p>ಇಲ್ಲದಿದ್ದರೆ ಅದು ಸಿಬ್ಬಂದಿಯ ಮೇಲೆ ದಾಳಿ ಮಾಡುವ ಸಾಧ್ಯತೆ ಇತ್ತು. ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳುತಿಳಿಸಿದ್ದಾರೆ.</p>.<p>ಸರಿಯಾದ ಪ್ರಮಾಣದ ಅರೆವಳಿಕೆ ಮದ್ದು ಅದರ ದೇಹಕ್ಕೆ ಸೇರದೆ ಇರುವುದೇ, ಅದು ಎಚ್ಚರಗೊಳ್ಳಲು ಕಾರಣವಾಗಿದೆ. ಮದ್ದಿನ ಪ್ರಮಾಣದ ಅಂದಾಜು ಸರಿಯಾಗಿ ಸಿಗದ ಕಾರಣ ಕಾಡಾನೆಗೆ ಬೇಗ ಎಚ್ಚರವಾಗಿದೆ. ಈ ಕಾಡಾನೆಯನ್ನು ಹಿಡಿಯಲು ಗುರುವಾರ ಮತ್ತೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>