ಐದು ವರ್ಷಗಳ ಹಿಂದೆ ಕಂದಕ ಮುಚ್ಚಿ ಗಿಡ ನೆಡಲಾಯಿತು. ಸಮಾಜ ಸೇವಕ ಕೆ. ಬಾಗೇಗೌಡ ಅವರ ಸಹಕಾರದಿಂದ ನ್ಯಾಯಾಧೀಶರು, ವಕೀಲರ ಸಂಘದ ಪದಾಧಿಕಾರಿಗಳು, ಅರಣ್ಯ ಇಲಾಖೆ ಹಾಗೂ ನ್ಯಾಯಾಲಯದ ಸಿಬ್ಬಂದಿಯ ಪರಿಶ್ರಮದಿಂದ ನೂರಾರು ಮರಗಳು ಬೆಳೆದು ನಿಂತಿವೆ. ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಅವುಗಳ ಸುತ್ತಲೂ ಟ್ರೀಗಾರ್ಡ್ ಮಾಡಿಸಿದ್ದರಿಂದ ಬೆಳವಣಿಗೆಗೆ ಸಹಕಾರಿಯಾಯಿತು.