ಕಸಾಪ ತಾಲ್ಲೂಕು ಅಧ್ಯಕ್ಷ ಮತ್ತೀಕೆರೆ ಬಿ.ಚಲುವರಾಜು ಮಾತನಾಡಿ, ತೇಜಸ್ವಿ ಕನ್ನಡ ಸಾಹಿತ್ಯಲೋಕದ ಜೀವಂತ ಕವಿ. ಸಾಹಿತ್ಯ ಅಲ್ಲದೆ ಸಾಹಿತ್ಯೇತರ ಚಟುವಟಿಕೆಯಲ್ಲಿ ಹೆಸರು ಮಾಡಿದ ಅಪರೂಪದ ವ್ಯಕ್ತಿ. ಅವರ ಕೃತಿಗಳು ಸಿನಿಮಾ, ನಾಟಕಗಳಾಗಿ ಜನರ ಮನಸೂರೆಗೊಂಡಿವೆ. ಪ್ರಕೃತಿಯನ್ನು ಅತಿಹೆಚ್ಚಾಗಿ ಪ್ರೀತಿಸಿ, ಛಾಯಾಚಿತ್ರ ತೆಗೆಯುವುದರಲ್ಲಿ ಪ್ರಾವೀಣ್ಯ ಗಳಿಸಿದ್ದರು ಎಂದು ಹೇಳಿದರು.