<p><strong>ಹಾರೋಹಳ್ಳಿ:</strong> ರೈತರ ಅನುಕೂಲಕ್ಕಾಗಿ ಅಂಗಾಂಶ ಕೃಷಿ ಘಟಕ ಸ್ಥಾಪಿಸುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದಿಂದ ₹77.97 ಲಕ್ಷ ಸಹಾಯಧನ ಪಡೆದು ವಂಚಿಸಿರುವ ಮೂವರ ವಿರುದ್ಧ ಹಾರೋಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p>.<p>ಚಿಕ್ಕಮಗಳೂರು ಮೂಲದ ಪರಮೇಶಯ್ಯ, ಬೆಂಗಳೂರಿನ ಎಚ್ಎಸ್ಆರ್ ಲೇ ಔಟ್ ನಿವಾಸಿ ಶುಭ ಮತ್ತು ಹರೀಶ್ ಕೆ.ಆಚಾರ್ ಈ ಮೂವರ ವಿರುದ್ಧ ನೆಲಮಂಗಲದ ರವೀಶ್ ಎಂಬುವರು ನೀಡಿದ ದೂರಿನ ಮೇರೆಗೆ ಹಾರೋಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p>.<p>ತೋಟಗಾರಿಕೆ ಇಲಾಖೆಯ ಎನ್ಹೆಚ್ಎಂ, ಎಸ್ಎಚ್ಎಂ, ಎಂಐಡಿಹೆಚ್ ಯೋಜನೆ ಅಡಿ ಸಬ್ಸಿಡಿ ಪಡೆದು ಅಂಗಾಂಶ ಕೃಷಿ ಘಟಕ ಮತ್ತು ಶೀತಲ ಘಟಕ ಸ್ಥಾಪಿಸಲು ಅವಕಾಶವಿದೆ. ಸರ್ಕಾರದಿಂದ ಸಹಾಯಧನ ಪಡೆದು ಅಂಗಾಂಶ ಕೃಷಿ ಘಟಕ ಸ್ಥಾಪಿಸಿದರೆ ಕನಿಷ್ಠ 15 ವರ್ಷ ವಾರ್ಷಿಕವಾಗಿ ₹25 ಲಕ್ಷ ಸಸಿಗಳನ್ನು ರೈತರಿಗೆ ಕಡಿಮೆ ದರದಲ್ಲಿ ನೀಡಬೇಕು ಎಂಬ ಷರತ್ತುಗಳೊಂದಿಗೆ ಸರ್ಕಾರದಿಂದ ಸಹಾಯಧನ ಮಂಜೂರು ಮಾಡಿತ್ತು.</p>.<p>ಇದನ್ನೇ ಬಂಡವಾಳ ಮಾಡಿಕೊಂಡಿರುವ ಆರೋಪಿಗಳು 2018ರಲ್ಲಿ ರಾಮನಗರ ಜಿಲ್ಲಾ ತೋಟಗಾರಿಕೆ ಇಲಾಖೆ ಕಾರ್ಯದೇಶ ಪಡೆದು ಕೃಷ್ಣ ಬಯೋಟೆಕ್ ಸಂಸ್ಥೆಯಿಂದ ಕಿರಣಗೆರೆ ಗ್ರಾಮದಲ್ಲಿ ಅಂಗಾಂಶ ಕೃಷಿ ಘಟಕ ಸ್ಥಾಪಿಸಿದ್ದರು. ನಕಲಿ ಡಿಪಿಆರ್ ಮತ್ತು ನಕಲಿ ಬಿಲ್ ಸೃಷ್ಟಿಸಿ ಸರ್ಕಾರದಿಂದ ₹77.97 ಲಕ್ಷ ಸಹಾಯಧನ ಪಡೆದಿದ್ದ ಆರೋಪಿಗಳು ನಂತರ ಅಂಗಾಂಶ ಕೃಷಿ ಘಟಕವನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು ಎಂದು ದೂರಿನಲ್ಲಿ ಆರೋಪ ಮಾಡಲಾಗಿತ್ತು.</p>.<p>ಪ್ರಕರಣದ ಪ್ರಮುಖ ಆರೋಪಿ ಪರಮೇಶಯ್ಯ ಸರ್ಕಾರದಿಂದ ಸಹಾಯಧನ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರು ಮತ್ತು ಸರ್ಕಾರಿ ಅಧಿಕಾರಿಗಳಿಂದ ಹಣ ಪಡೆದಿದ್ದ. ಹಲವು ಉದ್ಯಮಿಗಳಿಗೆ ನಕಲಿ ದಾಖಲೆ, ನಕಲಿ ಬಿಲ್ ಸೃಷ್ಟಿಸಿ ವಂಚನೆ ಮಾಡಿದ್ದಾನೆ. ಕೆಲಸ ಕೊಡಿಸುವುದಾಗಿ ಜನರಿಂದ ಹಣ ಪಡೆದು ವಂಚನೆ ಮಾಡಿದ್ದಾನೆ. ಈ ಸಂಬಂಧ ಈಗಾಗಲೇ ಈತನ ವಿರುದ್ಧ ಹಲವು ಪ್ರಕರಣ ದಾಖಲಾಗಿ ಶಿಕ್ಷೆಯೂ ಆಗಿದೆ ಎಂದು ದೂರಿನಲ್ಲಿ ಅಪಾದನೆ ಮಾಡಿದ್ದಾರೆ. </p>.<p>ಸರ್ಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರ ನಿರ್ದೇಶನದಂತೆ ಈಗಾಗಲೇ ಆರೋಪಿ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಉಪ ಲೋಕಾಯುಕ್ತರು ವಿಚಾರಣೆ ನಡೆಸಿದ್ದಾರೆ ಎಂದು ರವೀಶ್ ದೂರಿನಲ್ಲಿ ತಿಳಿಸಿದ್ದಾರೆ. </p>
<p><strong>ಹಾರೋಹಳ್ಳಿ:</strong> ರೈತರ ಅನುಕೂಲಕ್ಕಾಗಿ ಅಂಗಾಂಶ ಕೃಷಿ ಘಟಕ ಸ್ಥಾಪಿಸುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದಿಂದ ₹77.97 ಲಕ್ಷ ಸಹಾಯಧನ ಪಡೆದು ವಂಚಿಸಿರುವ ಮೂವರ ವಿರುದ್ಧ ಹಾರೋಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p>.<p>ಚಿಕ್ಕಮಗಳೂರು ಮೂಲದ ಪರಮೇಶಯ್ಯ, ಬೆಂಗಳೂರಿನ ಎಚ್ಎಸ್ಆರ್ ಲೇ ಔಟ್ ನಿವಾಸಿ ಶುಭ ಮತ್ತು ಹರೀಶ್ ಕೆ.ಆಚಾರ್ ಈ ಮೂವರ ವಿರುದ್ಧ ನೆಲಮಂಗಲದ ರವೀಶ್ ಎಂಬುವರು ನೀಡಿದ ದೂರಿನ ಮೇರೆಗೆ ಹಾರೋಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.</p>.<p>ತೋಟಗಾರಿಕೆ ಇಲಾಖೆಯ ಎನ್ಹೆಚ್ಎಂ, ಎಸ್ಎಚ್ಎಂ, ಎಂಐಡಿಹೆಚ್ ಯೋಜನೆ ಅಡಿ ಸಬ್ಸಿಡಿ ಪಡೆದು ಅಂಗಾಂಶ ಕೃಷಿ ಘಟಕ ಮತ್ತು ಶೀತಲ ಘಟಕ ಸ್ಥಾಪಿಸಲು ಅವಕಾಶವಿದೆ. ಸರ್ಕಾರದಿಂದ ಸಹಾಯಧನ ಪಡೆದು ಅಂಗಾಂಶ ಕೃಷಿ ಘಟಕ ಸ್ಥಾಪಿಸಿದರೆ ಕನಿಷ್ಠ 15 ವರ್ಷ ವಾರ್ಷಿಕವಾಗಿ ₹25 ಲಕ್ಷ ಸಸಿಗಳನ್ನು ರೈತರಿಗೆ ಕಡಿಮೆ ದರದಲ್ಲಿ ನೀಡಬೇಕು ಎಂಬ ಷರತ್ತುಗಳೊಂದಿಗೆ ಸರ್ಕಾರದಿಂದ ಸಹಾಯಧನ ಮಂಜೂರು ಮಾಡಿತ್ತು.</p>.<p>ಇದನ್ನೇ ಬಂಡವಾಳ ಮಾಡಿಕೊಂಡಿರುವ ಆರೋಪಿಗಳು 2018ರಲ್ಲಿ ರಾಮನಗರ ಜಿಲ್ಲಾ ತೋಟಗಾರಿಕೆ ಇಲಾಖೆ ಕಾರ್ಯದೇಶ ಪಡೆದು ಕೃಷ್ಣ ಬಯೋಟೆಕ್ ಸಂಸ್ಥೆಯಿಂದ ಕಿರಣಗೆರೆ ಗ್ರಾಮದಲ್ಲಿ ಅಂಗಾಂಶ ಕೃಷಿ ಘಟಕ ಸ್ಥಾಪಿಸಿದ್ದರು. ನಕಲಿ ಡಿಪಿಆರ್ ಮತ್ತು ನಕಲಿ ಬಿಲ್ ಸೃಷ್ಟಿಸಿ ಸರ್ಕಾರದಿಂದ ₹77.97 ಲಕ್ಷ ಸಹಾಯಧನ ಪಡೆದಿದ್ದ ಆರೋಪಿಗಳು ನಂತರ ಅಂಗಾಂಶ ಕೃಷಿ ಘಟಕವನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು ಎಂದು ದೂರಿನಲ್ಲಿ ಆರೋಪ ಮಾಡಲಾಗಿತ್ತು.</p>.<p>ಪ್ರಕರಣದ ಪ್ರಮುಖ ಆರೋಪಿ ಪರಮೇಶಯ್ಯ ಸರ್ಕಾರದಿಂದ ಸಹಾಯಧನ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರು ಮತ್ತು ಸರ್ಕಾರಿ ಅಧಿಕಾರಿಗಳಿಂದ ಹಣ ಪಡೆದಿದ್ದ. ಹಲವು ಉದ್ಯಮಿಗಳಿಗೆ ನಕಲಿ ದಾಖಲೆ, ನಕಲಿ ಬಿಲ್ ಸೃಷ್ಟಿಸಿ ವಂಚನೆ ಮಾಡಿದ್ದಾನೆ. ಕೆಲಸ ಕೊಡಿಸುವುದಾಗಿ ಜನರಿಂದ ಹಣ ಪಡೆದು ವಂಚನೆ ಮಾಡಿದ್ದಾನೆ. ಈ ಸಂಬಂಧ ಈಗಾಗಲೇ ಈತನ ವಿರುದ್ಧ ಹಲವು ಪ್ರಕರಣ ದಾಖಲಾಗಿ ಶಿಕ್ಷೆಯೂ ಆಗಿದೆ ಎಂದು ದೂರಿನಲ್ಲಿ ಅಪಾದನೆ ಮಾಡಿದ್ದಾರೆ. </p>.<p>ಸರ್ಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರ ನಿರ್ದೇಶನದಂತೆ ಈಗಾಗಲೇ ಆರೋಪಿ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಉಪ ಲೋಕಾಯುಕ್ತರು ವಿಚಾರಣೆ ನಡೆಸಿದ್ದಾರೆ ಎಂದು ರವೀಶ್ ದೂರಿನಲ್ಲಿ ತಿಳಿಸಿದ್ದಾರೆ. </p>