ಕನಕಪುರ: ತಾಲ್ಲೂಕಿನ ಗೇರಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಪುಟ್ಟ ನಂಜಯ್ಯ (62) ಎಂಬುವರು ಗುರುವಾರ ಮೃತಪಟ್ಟಿದ್ದಾರೆ.
ರಾತ್ರಿ ಹೊಲದಲ್ಲಿ ಒಕ್ಕಣೆ ಮಾಡಿದ್ದ ರಾಗಿ ಹುಲ್ಲನ್ನು ಕಾಯಲು ಪುಟ್ಟ ನಂಜಯ್ಯ ಹೋಗಿದ್ದರು. ನಸುಕಿನಲ್ಲಿ ಹೊಲಕ್ಕೆ ಬಂದಿರುವ ಮೂರು ಕಾಡಾನೆಗಳ ಪೈಕಿ, ಒಂದು ಆನೆ ನಂಜಯ್ಯ ಅವರ ಅವರ ಮೇಲೆ ದಾಳಿ ನಡೆಸಿ ತಲೆ ಮೇಲೆ ಕಾಲಿಟ್ಟಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕನಕಪುರ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.