ಊರಿಗೆ ಬಂದ ಸಾಕಮ್ಮ ಅವರಿಗೆ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಹೂವಿನಹಾರ ಹಾಕಿ ಸ್ವಾಗತ ಕೋರಿದರು. ಮೂವತ್ತೈದು ವರ್ಷಗಳ ನಂತರ ತವರಿಗೆ ಮರಳಿದ ಸಾಕಮ್ಮ ಅವರು ಈ ವೇಳೆ ಗದ್ಗದಿತರಾದವರು. ತಮ್ಮ ಕುಟುಂಬದವರು ಹಾಗೂ ಸಂಬಂಧಿಕರನ್ನು ಕಣ್ತುಂಬಿಕೊಂಡ ಅವರ ಕಣ್ಣುಗಳಲ್ಲಿ ಆನಂದಬಾಷ್ಪ ಬಂತು.
ಬಳಿಕ ಮಾತನಾಡಿದ ವಿಜಿಯಣ್ಣ, ‘ಬಹಿಷ್ಕಾರ ಹಾಕುವುದು ಕಾನೂನು ಪ್ರಕಾರ ಅಪರಾಧ. ಯಾರೇ ಮಾಡಿದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ತಪ್ಪು ಮಾಡಬಾರದು ಎಂಬ ಉದ್ದೇಶದಿಂದ ಹಿಂದೆ ಹಿರಿಯರು ನಿಯಮ ಮಾಡಿದ್ದರು. ಅದನ್ನು ಕೆಲವರು ದುರುಪಯೋಗ ಮಾಡಿಕೊಂಡು ಬಹಿಷ್ಕಾರ ಹಾಕಿ, ಹಣ ವಸೂಲಿ ಮಾಡುವುದು ಸರಿಯಲ್ಲ. ಮುಂದೆ ಇಂತಹ ಘಟನೆಗಳು ಗ್ರಾಮದಲ್ಲಿ ಜರುಗಬಾರದು’ ಎಂದು ಎಚ್ಚರಿಕೆ ನೀಡಿದರು.
ಹಾರೋಹಳ್ಳಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಟರಾಜ್, ಮುಖಂಡರಾದ ನೀಲಿ ರಮೇಶ್, ನಾಗೇಶ್ ಹಾಗೂ ಗ್ರಾಮದ ಮುಖಂಡರು ಇದ್ದರು.