ಇದೇ ಸಂದರ್ಭದಲ್ಲಿ ವಿಚಾರಗೋಷ್ಠಿ ನಡೆಯಲಿದ್ದು, ‘ರಾಮನಗರ ಜಿಲ್ಲೆಯಾಗಿ 15 ವರ್ಷಗಳು ಮತ್ತು ನಿರೀಕ್ಷೆಗಳು’ ಕುರಿತು ಲೇಖಕ ಪಾರ್ವತೀಶ ಬಿಳಿದಾಳೆ ಮಾತನಾಡಲಿದ್ದಾರೆ. ಅರ್ಕಾವತಿ ನದಿಯ ಸ್ಥಿತಿಗತಿ ಕುರಿತು ಕಾಂತರಾಜ ಪಟೇಲ್ ವಿಚಾರ ಮಂಡಿಸಲಿದ್ದಾರೆ. ಇತಿಹಾಸಕಾರ ಮುನಿರಾಜಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.