<p><strong>ರಾಮನಗರ: </strong>ರಾಜ್ಯದಾದ್ಯಂತ 4,900 ಕಿ.ಮೀ. ವ್ಯಾಪಕ ಸಂಚಾರದ ನಂತರ ಕೊನೆಯಲ್ಲಿ ರಾಮನಗರಕ್ಕೆ ಬಂದ ವಂದೇ ಮಾತರಂ ಭಾ-ರಥ ಯಾತ್ರೆ ಭಾನುವಾರ ಬರ ಮಾಡಿಕೊಳ್ಳಲಾಯಿತು.<br /> <br /> ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗಿಬಂದ ಭಾ-ರಥ ಯಾತ್ರೆಯು ಜಿಲ್ಲೆಯ ಗಡಿ ಮುಟ್ಟಿದಾಗ ನೂರಾರು ಯುವಕರು ಬೈಕ್ ಮೂಲಕ ಮೊದಲು ಐಜೂರು ವೃತ್ತಕ್ಕೆ ಕರೆತಂದರು.<br /> <br /> ನಂತರ ಹಳೇ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡಿತು. ಗಾಯಕ ರಮೇಶ್ಚಂದ್ರ ಮತ್ತು ತಂಡದವರಿಂದ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು.<br /> ಈಸಂದರ್ಭದಲ್ಲಿ ಭಾ-ರಥ ಯಾತ್ರೆಯ ಪದಾಧಿಕಾರಿ ಎಸ್.ಎಲ್.ಎನ್.ಸ್ವಾಮಿ ಮಾತನಾಡಿ, ದೇಶವು 70ನೇ ಸ್ವಾತಂತ್ರ್ಯ ದಿನಾಚರ<br /> ಣೆಯನ್ನು ಆಚರಿಸುತ್ತಿದೆ. ಆ ದಿನಗಳಲ್ಲಿ ಸ್ವಾತಂತ್ರ್ಯವನ್ನು ಕಂಡವರು ಇಂದು ಶೇ 5ರಷ್ಟು ಮಾತ್ರ ಇದ್ದಾರೆ.<br /> <br /> ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.<br /> ಸ್ವಾತಂತ್ರ್ಯ ದಿನಾಚರಣೆಯು ಒಂದು ದಿನದ ರಜೆಯ ಮಜಾದ ಪ್ರತೀಕವಾಗಿದೆ.<br /> <br /> ಇದನ್ನು ಹೋಗಲಾಡಿಸಿ ಎಲ್ಲರಲ್ಲಿಯೂ ದೇಶಭಕ್ತಿಯನ್ನು ಮೈಗೂಡಿ<br /> ಸುವ ನಿಟ್ಟಿನಲ್ಲಿ ಭಾ-ರಥ ಯಾತ್ರೆಯು ಯುವ ಸಮೂಹ ಎಚ್ಚರಿಸುವ ದಿಕ್ಕಿನಲ್ಲಿ ಒಂದು ತಿಂಗಳ ಕಾಲ ರಾಜ್ಯದಾದ್ಯಂತ ರಥಯಾತ್ರೆ ಕೈಗೊಂಡಿದೆ ಎಂದು ಅವರು ಹೇಳಿದರು.</p>.<p>ಪದಾಧಿಕಾರಿಗಳಾದ ಬಿ.ಟಿ. ಅನಿಲ್ ಬಾಬು, ಪ್ರವೀಣ್ ಗೌಡ, ರಾಜೇಶ್, ಶಂಕರ್, ರಾಮಾಂಜನೇಯ, ಚಂದ್ರಶೇಖರ್ ರೆಡ್ಡಿ, ರಮೇಶ್, ಚಂದನ್, ಆನಂದ ಸ್ವಾಮಿ, ಗುಂಗರಹಳ್ಳಿ ಚನ್ನಪ್ಪ ಇತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ: </strong>ರಾಜ್ಯದಾದ್ಯಂತ 4,900 ಕಿ.ಮೀ. ವ್ಯಾಪಕ ಸಂಚಾರದ ನಂತರ ಕೊನೆಯಲ್ಲಿ ರಾಮನಗರಕ್ಕೆ ಬಂದ ವಂದೇ ಮಾತರಂ ಭಾ-ರಥ ಯಾತ್ರೆ ಭಾನುವಾರ ಬರ ಮಾಡಿಕೊಳ್ಳಲಾಯಿತು.<br /> <br /> ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗಿಬಂದ ಭಾ-ರಥ ಯಾತ್ರೆಯು ಜಿಲ್ಲೆಯ ಗಡಿ ಮುಟ್ಟಿದಾಗ ನೂರಾರು ಯುವಕರು ಬೈಕ್ ಮೂಲಕ ಮೊದಲು ಐಜೂರು ವೃತ್ತಕ್ಕೆ ಕರೆತಂದರು.<br /> <br /> ನಂತರ ಹಳೇ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡಿತು. ಗಾಯಕ ರಮೇಶ್ಚಂದ್ರ ಮತ್ತು ತಂಡದವರಿಂದ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು.<br /> ಈಸಂದರ್ಭದಲ್ಲಿ ಭಾ-ರಥ ಯಾತ್ರೆಯ ಪದಾಧಿಕಾರಿ ಎಸ್.ಎಲ್.ಎನ್.ಸ್ವಾಮಿ ಮಾತನಾಡಿ, ದೇಶವು 70ನೇ ಸ್ವಾತಂತ್ರ್ಯ ದಿನಾಚರ<br /> ಣೆಯನ್ನು ಆಚರಿಸುತ್ತಿದೆ. ಆ ದಿನಗಳಲ್ಲಿ ಸ್ವಾತಂತ್ರ್ಯವನ್ನು ಕಂಡವರು ಇಂದು ಶೇ 5ರಷ್ಟು ಮಾತ್ರ ಇದ್ದಾರೆ.<br /> <br /> ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.<br /> ಸ್ವಾತಂತ್ರ್ಯ ದಿನಾಚರಣೆಯು ಒಂದು ದಿನದ ರಜೆಯ ಮಜಾದ ಪ್ರತೀಕವಾಗಿದೆ.<br /> <br /> ಇದನ್ನು ಹೋಗಲಾಡಿಸಿ ಎಲ್ಲರಲ್ಲಿಯೂ ದೇಶಭಕ್ತಿಯನ್ನು ಮೈಗೂಡಿ<br /> ಸುವ ನಿಟ್ಟಿನಲ್ಲಿ ಭಾ-ರಥ ಯಾತ್ರೆಯು ಯುವ ಸಮೂಹ ಎಚ್ಚರಿಸುವ ದಿಕ್ಕಿನಲ್ಲಿ ಒಂದು ತಿಂಗಳ ಕಾಲ ರಾಜ್ಯದಾದ್ಯಂತ ರಥಯಾತ್ರೆ ಕೈಗೊಂಡಿದೆ ಎಂದು ಅವರು ಹೇಳಿದರು.</p>.<p>ಪದಾಧಿಕಾರಿಗಳಾದ ಬಿ.ಟಿ. ಅನಿಲ್ ಬಾಬು, ಪ್ರವೀಣ್ ಗೌಡ, ರಾಜೇಶ್, ಶಂಕರ್, ರಾಮಾಂಜನೇಯ, ಚಂದ್ರಶೇಖರ್ ರೆಡ್ಡಿ, ರಮೇಶ್, ಚಂದನ್, ಆನಂದ ಸ್ವಾಮಿ, ಗುಂಗರಹಳ್ಳಿ ಚನ್ನಪ್ಪ ಇತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>