<p><strong>ಕುಂದಗೋಳ</strong>: ಮದ್ಯ ವ್ಯಸನದಿಂದ ಮುಕ್ತಿ ಹೊಂದಿದ 45 ಶಿಬಿರಾರ್ಥಿಗಳಿಗೆ ಇಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮರು ವಿವಾಹ ಮಾಡಲಾಯಿತು.</p>.<p>ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಿಲ್ಲಾ ಜನಜಾಗೃತಿ ವೇದಿಕೆ ಗದಗ, ಪಟ್ಟಣ ಪಂಚಾಯಿತಿ ಕುಂದಗೋಳ ಇವರ ಸಂಯುಕ್ತ ಆಶ್ರಯದಲ್ಲಿ 7 ದಿನಗಳ ಕಾಲ ಶಿಬಿರ ಆಯೋಜಿಸಲಾಗಿತ್ತು.</p>.<p>ಮದ್ಯ ವ್ಯಸನದಿಂದ ಹಣ ಕಳೆದುಕೊಳ್ಳಬೇಕಾಗುತ್ತದೆ ಹಾಗೂ ನೆಮ್ಮದಿಯೂ ಹಾಳಾಗುತ್ತದೆ. ಕುಡಿತದ ಚಟಬಿಟ್ಟು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬಾಳಿ ಎಂದು ಜನಜಾಗೃತಿ ವೇದಿಕೆಯ ಕೊಪ್ಪಳದ ಶ್ರೀ ಮಾಧವ ನಾಯಕ್ ಹೇಳಿದರು.</p>.<p>ಕುಂದಗೋಳ ಪೊಲೀಸ್ ಠಾಣೆಯ ಪಿಎಸ್ಐ ಎನ್.ಎಸ್. ಜಕ್ಕಲಿ ಮಾತನಾಡಿ, ಮದ್ಯಪಾನದ ಚಟ ಹೆಂಡತಿ-ಮಕ್ಕಳಿಂದ ದೂರ ಆಗುವಂತೆ ಮಾಡುತ್ತದೆ. ವ್ಯಸನಮುಕ್ತರಾಗಿ ಒಳ್ಳೆಯ ಜೀವನ ನಡೆಸಿ ಎಂದರು. ಮರು ವಿವಾಹವಾದ ಶಿಬಿರಾರ್ಥಿಗಳಿಗೆ ಕಲ್ಯಾಣ ಪುರದ ಬಸವಣ್ಣಜ್ಜನವರು ಶುಭ ಹಾರೈಸಿದರು. ಶಿಬಿರದ ಅಧ್ಯಕ್ಷ ಬಸವರಾಜ ಶಿರಸಂಗಿ ಮಾತನಾಡಿದರು.</p>.<p>ಗ್ರಾಮಾಭಿವೃದ್ಧಿ ಯೋಜನೆಯ ಗದಗ ಜಿಲ್ಲಾ ನಿರ್ದೇಶಕ ಯೋಗಿಶ್ .ಎ, ದೇವೇಂದ್ರಪ್ಪ ಕಾಗೆನವರ, ರಾಜಣ್ಣ ಕೊರವಿ, ಗಣೇಶ ಬಿ ವಿಠ್ಠಲ ಚವ್ಹಾಣ, ಜಯಂತ, ರಾಜಶ್ರೀ, ಸುರೇಶ ಮೆಣಸಗಿ, ಮಂಜುನಾಥ ಶಿಂಗಣ್ಣವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಗೋಳ</strong>: ಮದ್ಯ ವ್ಯಸನದಿಂದ ಮುಕ್ತಿ ಹೊಂದಿದ 45 ಶಿಬಿರಾರ್ಥಿಗಳಿಗೆ ಇಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮರು ವಿವಾಹ ಮಾಡಲಾಯಿತು.</p>.<p>ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಿಲ್ಲಾ ಜನಜಾಗೃತಿ ವೇದಿಕೆ ಗದಗ, ಪಟ್ಟಣ ಪಂಚಾಯಿತಿ ಕುಂದಗೋಳ ಇವರ ಸಂಯುಕ್ತ ಆಶ್ರಯದಲ್ಲಿ 7 ದಿನಗಳ ಕಾಲ ಶಿಬಿರ ಆಯೋಜಿಸಲಾಗಿತ್ತು.</p>.<p>ಮದ್ಯ ವ್ಯಸನದಿಂದ ಹಣ ಕಳೆದುಕೊಳ್ಳಬೇಕಾಗುತ್ತದೆ ಹಾಗೂ ನೆಮ್ಮದಿಯೂ ಹಾಳಾಗುತ್ತದೆ. ಕುಡಿತದ ಚಟಬಿಟ್ಟು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬಾಳಿ ಎಂದು ಜನಜಾಗೃತಿ ವೇದಿಕೆಯ ಕೊಪ್ಪಳದ ಶ್ರೀ ಮಾಧವ ನಾಯಕ್ ಹೇಳಿದರು.</p>.<p>ಕುಂದಗೋಳ ಪೊಲೀಸ್ ಠಾಣೆಯ ಪಿಎಸ್ಐ ಎನ್.ಎಸ್. ಜಕ್ಕಲಿ ಮಾತನಾಡಿ, ಮದ್ಯಪಾನದ ಚಟ ಹೆಂಡತಿ-ಮಕ್ಕಳಿಂದ ದೂರ ಆಗುವಂತೆ ಮಾಡುತ್ತದೆ. ವ್ಯಸನಮುಕ್ತರಾಗಿ ಒಳ್ಳೆಯ ಜೀವನ ನಡೆಸಿ ಎಂದರು. ಮರು ವಿವಾಹವಾದ ಶಿಬಿರಾರ್ಥಿಗಳಿಗೆ ಕಲ್ಯಾಣ ಪುರದ ಬಸವಣ್ಣಜ್ಜನವರು ಶುಭ ಹಾರೈಸಿದರು. ಶಿಬಿರದ ಅಧ್ಯಕ್ಷ ಬಸವರಾಜ ಶಿರಸಂಗಿ ಮಾತನಾಡಿದರು.</p>.<p>ಗ್ರಾಮಾಭಿವೃದ್ಧಿ ಯೋಜನೆಯ ಗದಗ ಜಿಲ್ಲಾ ನಿರ್ದೇಶಕ ಯೋಗಿಶ್ .ಎ, ದೇವೇಂದ್ರಪ್ಪ ಕಾಗೆನವರ, ರಾಜಣ್ಣ ಕೊರವಿ, ಗಣೇಶ ಬಿ ವಿಠ್ಠಲ ಚವ್ಹಾಣ, ಜಯಂತ, ರಾಜಶ್ರೀ, ಸುರೇಶ ಮೆಣಸಗಿ, ಮಂಜುನಾಥ ಶಿಂಗಣ್ಣವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>