ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯಪಾನ ನಿಷೇಧಕ್ಕೆ ಶಿವಮೊಗ್ಗ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯ ಆಗ್ರಹ

Last Updated 3 ಮಾರ್ಚ್ 2020, 14:38 IST
ಅಕ್ಷರ ಗಾತ್ರ

ಶಿವಮೊಗ್ಗ: ಕುಡಿತದಿಂದ ಆರ್ಥಿಕ ನಷ್ಟದ ಜತೆಗೆ, ಸಾಮಾಜಿಕಸಂಕಷ್ಟಗಳೂಎದುರಾಗುತ್ತವೆ. ಮದ್ಯಪಾನ ಮುಕ್ತ ಸಮಾಜವೇ ಇದಕ್ಕೆಲ್ಲ ಪರಿಹಾರ ಎಂದು ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ವಿಜಯಾ ಶ್ರೀಧರ್‌ ಪ್ರತಿಪಾದಿಸಿದರು.

ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿರುವ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ನಾಲ್ಕನೇ ಗೋಷ್ಠಿಯಲ್ಲಿ ಅವರು ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡು ಮದ್ಯಪಾನ ನಿಷೇಧಿಸಬೇಕು. ಮದ್ಯಪಾನ ಮುಕ್ತ ಸಮಾಜ ನಿರ್ಮಾಣವಾದರೆ ಅತ್ಯಾಚಾರ, ಶೋಷಣೆ, ಕಳವು,ಕೊಲೆಪ್ರಕರಣಗಳೂ ನಿಯಂತ್ರಣಕ್ಕೆ ಬರುತ್ತವೆ ಎಂದು ಕಿವಿಮಾತು ಹೇಳಿದರು.

ಲೇಖಕಿ ಶೀಲಾ ಸುರೇಶ್ ಅವರ ಅಭಿಪ್ರಾಯಕ್ಕೆಪ್ರತಿಕ್ರಿಯಿಸಿದ ವಿಜಯಾ ಶ್ರೀಧರ್ ಅವರು, ಮಹಿಳೆ ಅತ್ಯಂತ ಹೆಚ್ಚಿನ ಶೋಷಣೆಗೆ ಒಳಗಾಗುತ್ತಿದ್ದಾಳೆ.ತಮ್ಮ ಕುಟುಂಬದಲ್ಲೇಬಂಧಿಯಾಗಿದ್ದಾಳೆ. ಎಷ್ಟೋ ಮಹಿಳೆಯರು ಕುಡುಕ ಗಂಡನನ್ನು ಕಟ್ಟಿಕೊಂಡು ಕನಸುಗಳನ್ನೇ ಮರೆತ್ತಿದ್ದಾರೆ. ಮಹಿಳೆಯ ದುಡಿಮೆಯಲ್ಲಿಕುಡಿಯುವ ಗಂಡಸರೇ ಹೆಚ್ಚಾಗಿದ್ದಾರೆ ಎಂದು ದೂರಿದರು.

ಸಂವಾದದಲ್ಲಿ ಬಿ.ಟಿ.ಅಂಬಿಕಾ, ಪ್ರೊ.ಕಿರಣ್ ದೇಸಾಯಿ, ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ. ಶಂಕರಪ್ಪ,ಜಗದೀಶ್ ಕಾಗಿನೆಲೆ ಉಪಸ್ಥಿತರಿದ್ದರು. ಸುಮಾಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT