ಶಿವಮೊಗ್ಗ: ಜಿಲ್ಲೆಯಾದ್ಯಂತ ಮಳೆ ಪ್ರಮಾಣ ತಗ್ಗಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದ ಮೂವರ ಪೈಕಿ ಒಬ್ಬರ ಶವ ಪತ್ತೆಯಾಗಿದೆ.
ಸನ್ನಿವಾಸ ಗ್ರಾಮದ ರಾಮಪ್ಪ(50), ಹರೀಶ್(20) ಹಾಗೂ ಕುಂಸಿ ಗ್ರಾಮದ ಅಮರನಾಥ(50) ಹಾಗೂ ನಾಗರಾಜ್ ಎಂಬುವವರು ಶನಿವಾರ ಕುಮುದ್ವತಿ ನದಿ ವೀಕ್ಷಿಸಲು ತೆರಳಿದ್ದಾಗ ಬೊಲೆರೋ ವಾಹನ ಮೈಮೇಲೆ ಬಂದ ಕಾರಣ ನದಿಗೆ ಬಿದ್ದಿದ್ದರು.ನಾಲ್ವರಲ್ಲಿ ಕುಂಸಿ ಗ್ರಾಮದ ನಾಗರಾಜ್ ಅವರನ್ನು ಸ್ಥಳದಲ್ಲಿದ್ದವರು ರಕ್ಷಿಸಿದ್ದರು.