ಪ್ರಸ್ತುತ ಸರ್ಕಾರದ ಕಟ್ಟಡ ನಿರ್ಮಾಣ,ದುರಸ್ತಿಗೆ ಪ್ರತ್ಯೇಕ ಕ್ವಾರಿ ಗುರುತಿಸಲಾಗಿದೆ. ಅಲ್ಲಿಂದಲೇಮರಳು ಪಡೆಯಲು ಸೂಚಿಸಲಾಗಿದೆ. ಯಾವುದೇ ಕಟ್ಟಡ ನಿರ್ಮಾಣಕ್ಕೆ ಮರಳಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಗುತ್ತಿಗೆದಾರರು ಸಬೂಬು ಹೇಳಬಾರದು.ಮರಳು ಸಾಗಿಸುವವರು ಸಂಗ್ರಹಣಾ ಸ್ಥಳ, ರಸ್ತೆ ಮಾರ್ಗ, ಪರವಾನಗಿದಿನ,ಸಮಯ ಹಾಗೂ ಕ್ವಾರಿಯಲ್ಲಿ ಸಿ.ಸಿ.ಟಿ.ವಿ. ಕ್ಯಾಮರಾ ಅಳವಡಿಕೆದಾಖಲೆಗಳನ್ನು ಹೊಂದಿರಬೇಕು ಎಂದರು.