<p><strong>ಶಿವಮೊಗ್ಗ</strong>: ಮೆಗ್ಗಾನ್ ಆಸ್ಪತ್ರೆಯ ರೋಗಿಗಳಿಗೆ ಆಮ್ಲಜನಕದ ಕೊರತೆ ನೀಗಿಸಲು ಶಿವಮೊಗ್ಗ ಪದವೀಧರರ ಸಹಕಾರ ಸಂಘ ನೆರವು ನೀಡಿತು.</p>.<p>ಕೋವಿಡ್ ರೋಗಿಗಳಿಗೆ ತುರ್ತಾಗಿ 11 ಟನ್ ಆಮ್ಲಜನಕ (ಒಂದು ಟ್ಯಾಂಕರ್) ಖರೀದಿಸಲು ಅಗತ್ಯವಾದ ₹ 2.10 ಲಕ್ಷ ಮೌಲ್ಯದ ಚೆಕ್ ಅನ್ನು ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ಅವರುಶನಿವಾರ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಸಿದ್ದಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಅವರಿಗೆ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಹಸ್ತಾಂತರಿಸಿದರು.</p>.<p>ಸಂಘದ ಉಪಾಧ್ಯಕ್ಷೆ ಎಸ್.ಮಮತಾ, ನಿರ್ದೇಶಕರಾದ ಟಿ.ಜಗದೀಶ, ಎಸ್.ಎಚ್.ಪ್ರಸನ್ನ, ಎಸ್.ಕೆ. ಕೃಷ್ಣಮೂರ್ತಿ, ಕಾರ್ಯದರ್ಶಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.</p>.<p>ಕೊರೊನಾ ಮೊದಲ ಅಲೆಯ ಸಮಯದಲ್ಲಿ ಸರ್ಕಾರ ಲಾಕ್ಡೌನ್ ಘೋಷಿಸಿದಾಗ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಪದವೀಧರರ ಸಂಘ ₹ 3 ಲಕ್ಷ ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿತ್ತು. ತುಂಗಾ ನದಿ ಪ್ರವಾಹದಿಂದ ನೆಲೆ ಕಳೆದುಕೊಂಡು ಕಾಳಜಿ ಕೇಂದ್ರಗಳಲ್ಲಿ ನೆಲೆಸಿದ್ದ ಕುಟುಂಬಗಳಿಗೆ ₹ 2 ಲಕ್ಷ ಮೌಲ್ಯದ ಹೊದಿಕೆಗಳು, ಟವಲ್ಗಳನ್ನು ನೀಡಿತ್ತು. ತಾಲ್ಲೂಕಿನ ಆಡೋನಹಳ್ಳಿ ಬಳಿ ಗಣಪತಿ ವಿಸರ್ಜನೆಗೆ ಹೋಗಿ ಮುಳುಗಿದ್ದ 12 ಯುವಕರ ಶವಗಳನ್ನು ಹೊರತೆಗೆದಿದ್ದ ಹರಿಹರದ ದಾದಾಪೀರ್ ಮತ್ತು ಅವರ ಮುಳುಗು ತಂಡದ ಸದಸ್ಯರಿಗೆ ಲೈಫ್ಜಾಕೇಟ್ ಹಾಗೂ ನಗದು ನೀಡಿ ಪುರಸ್ಕರಿಸಿತ್ತು.</p>.<p>‘ಪದವೀಧರರ ಸಂಘದ ಕಾರ್ಯ ಶ್ಲಾಘನೀಯ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಂಘಸಂಸ್ಥೆಗಳು ಕೈಜೋಡಿಸಿದರೆ ಯಶಸ್ಸು ಖಂಡಿತಾ ಸಾಧ್ಯ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಶ್ಲಾಘಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಮೆಗ್ಗಾನ್ ಆಸ್ಪತ್ರೆಯ ರೋಗಿಗಳಿಗೆ ಆಮ್ಲಜನಕದ ಕೊರತೆ ನೀಗಿಸಲು ಶಿವಮೊಗ್ಗ ಪದವೀಧರರ ಸಹಕಾರ ಸಂಘ ನೆರವು ನೀಡಿತು.</p>.<p>ಕೋವಿಡ್ ರೋಗಿಗಳಿಗೆ ತುರ್ತಾಗಿ 11 ಟನ್ ಆಮ್ಲಜನಕ (ಒಂದು ಟ್ಯಾಂಕರ್) ಖರೀದಿಸಲು ಅಗತ್ಯವಾದ ₹ 2.10 ಲಕ್ಷ ಮೌಲ್ಯದ ಚೆಕ್ ಅನ್ನು ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್ ಅವರುಶನಿವಾರ ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಸಿದ್ದಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಅವರಿಗೆ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಹಸ್ತಾಂತರಿಸಿದರು.</p>.<p>ಸಂಘದ ಉಪಾಧ್ಯಕ್ಷೆ ಎಸ್.ಮಮತಾ, ನಿರ್ದೇಶಕರಾದ ಟಿ.ಜಗದೀಶ, ಎಸ್.ಎಚ್.ಪ್ರಸನ್ನ, ಎಸ್.ಕೆ. ಕೃಷ್ಣಮೂರ್ತಿ, ಕಾರ್ಯದರ್ಶಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.</p>.<p>ಕೊರೊನಾ ಮೊದಲ ಅಲೆಯ ಸಮಯದಲ್ಲಿ ಸರ್ಕಾರ ಲಾಕ್ಡೌನ್ ಘೋಷಿಸಿದಾಗ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಪದವೀಧರರ ಸಂಘ ₹ 3 ಲಕ್ಷ ಮೌಲ್ಯದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿತ್ತು. ತುಂಗಾ ನದಿ ಪ್ರವಾಹದಿಂದ ನೆಲೆ ಕಳೆದುಕೊಂಡು ಕಾಳಜಿ ಕೇಂದ್ರಗಳಲ್ಲಿ ನೆಲೆಸಿದ್ದ ಕುಟುಂಬಗಳಿಗೆ ₹ 2 ಲಕ್ಷ ಮೌಲ್ಯದ ಹೊದಿಕೆಗಳು, ಟವಲ್ಗಳನ್ನು ನೀಡಿತ್ತು. ತಾಲ್ಲೂಕಿನ ಆಡೋನಹಳ್ಳಿ ಬಳಿ ಗಣಪತಿ ವಿಸರ್ಜನೆಗೆ ಹೋಗಿ ಮುಳುಗಿದ್ದ 12 ಯುವಕರ ಶವಗಳನ್ನು ಹೊರತೆಗೆದಿದ್ದ ಹರಿಹರದ ದಾದಾಪೀರ್ ಮತ್ತು ಅವರ ಮುಳುಗು ತಂಡದ ಸದಸ್ಯರಿಗೆ ಲೈಫ್ಜಾಕೇಟ್ ಹಾಗೂ ನಗದು ನೀಡಿ ಪುರಸ್ಕರಿಸಿತ್ತು.</p>.<p>‘ಪದವೀಧರರ ಸಂಘದ ಕಾರ್ಯ ಶ್ಲಾಘನೀಯ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಂಘಸಂಸ್ಥೆಗಳು ಕೈಜೋಡಿಸಿದರೆ ಯಶಸ್ಸು ಖಂಡಿತಾ ಸಾಧ್ಯ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಶ್ಲಾಘಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>