‘ಕಟಿಂಗ್ ಶಾಪ್ನಲ್ಲಿ ಕತ್ತರಿಸಿರುವ ಕೂದಲು, ಮಾಂಸದಂಗಡಿ ಹಾಗೂ ಚಿಕನ್ ಸ್ಟಾಲ್ನವರು ಕೋಳಿ ಪುಕ್ಕ ಹಾಗೂ ತ್ಯಾಜ್ಯ, ಹೋಟೆಲ್ ತ್ಯಾಜ್ಯ, ಮದ್ಯದಂಗಡಿಗಳಮಧ್ಯದ ಬಾಟಲ್ಗಳು ಹಾಗೂ ಪ್ಯಾಕೆಟ್ಗಳು ಮುಂತಾದ ತ್ಯಾಜ್ಯಗಳನ್ನು ಅವಳಿ ಕೆರೆಗಳ ಏರಿ ಮೇಲೆ ರಾಶಿ– ರಾಶಿಯಾಗಿ ಸುರಿಯುತ್ತಿದ್ದು,ಹಂದಿ, ನಾಯಿಗಳು ಕಸದ ಮೂಟೆಗಳನ್ನು ಎಳೆದಾಡಿ ಹೆದ್ದಾರಿಯ ಮಧ್ಯಕ್ಕೆ ಹಾಕುತ್ತಿವೆ. ಇದರಿಂದ ಪಾದಚಾರಿಗಳು ಮೂಗು ಹಿಡಿದೇ ಓಡಾಡುವಂತಾಗಿದೆ’ ಎನ್ನುತ್ತಾರೆ ಕೋಟಿಪುರ ಗ್ರಾಮದ ನಿವಾಸಿ ವೇದಮೂರ್ತಿ.