<p>ಭದ್ರಾವತಿ: ಜಮೀನು ಖಾತೆ ವಿಚಾರ ಸಂಬಂಧ ಲಂಚ ಪಡೆಯುತ್ತಿದ್ದ ವೇಳೆ ಬಿಳಕಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಕೇಶವಮೂರ್ತಿ ಮಂಗಳವಾರ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.</p>.<p>ಪಂಚಾಯಿತಿ ಕಚೇರಿಯಲ್ಲಿ ಜಮೀನು ಖಾತೆ ಮಾಡುವ ಸಂಬಂಧ ಹರೀಶ ಎಂಬುವರಿಂದ ₹70 ಸಾವಿರ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕೇಶವಮೂರ್ತಿ ಅವರನ್ನು ವಶಕ್ಕೆ ಪಡೆದರು.</p>.<p>ಘಟನೆ ವಿವರ: ಹೊಸನಗರ ತಾಲ್ಲೂಕಿನ ಹರೀಶ ಎಂಬುವರು ಬಿಳಿಕಿ ತಾಂಡಾದಲ್ಲಿ ಜಮೀನು ಹೊಂದಿದ್ದು, ಇದರ ಬಾಬ್ತು ಖಾತೆ ಹಾಗೂ ಜಾಗದ ಬಾಬ್ತು ಎನ್ಒಸಿ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಕೇಶವಮೂರ್ತಿ ₹ 1ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.<br />ಇದಕ್ಕೆ ಒಪ್ಪಿದ್ದ ಹರೀಶ್ ಈ ಹಿಂದೆಯೇ ₹ 5 ಸಾವಿರ ಮುಂಗಡ ನೀಡಿದ್ದು, ಮಂಗಳವಾರ ₹70 ಸಾವಿರದೊಂದಿಗೆ ಕಚೇರಿಗೆ ಬಂದು ಹಣ ನೀಡಿದ ವೇಳೆ ಆತನೊಂದಿಗೆ ಹಾಜರಿದ್ದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಪಿಡಿಒ ಅವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.</p>.<p>ಭ್ರಷ್ಟಾಚಾರ ನಿಗ್ರಹದಳದ ಶಿವಮೊಗ್ಗ ವಿಭಾಗದ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ವಸಂತಕುಮಾರ್, ಇಮ್ರಾನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭದ್ರಾವತಿ: ಜಮೀನು ಖಾತೆ ವಿಚಾರ ಸಂಬಂಧ ಲಂಚ ಪಡೆಯುತ್ತಿದ್ದ ವೇಳೆ ಬಿಳಕಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಕೇಶವಮೂರ್ತಿ ಮಂಗಳವಾರ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.</p>.<p>ಪಂಚಾಯಿತಿ ಕಚೇರಿಯಲ್ಲಿ ಜಮೀನು ಖಾತೆ ಮಾಡುವ ಸಂಬಂಧ ಹರೀಶ ಎಂಬುವರಿಂದ ₹70 ಸಾವಿರ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕೇಶವಮೂರ್ತಿ ಅವರನ್ನು ವಶಕ್ಕೆ ಪಡೆದರು.</p>.<p>ಘಟನೆ ವಿವರ: ಹೊಸನಗರ ತಾಲ್ಲೂಕಿನ ಹರೀಶ ಎಂಬುವರು ಬಿಳಿಕಿ ತಾಂಡಾದಲ್ಲಿ ಜಮೀನು ಹೊಂದಿದ್ದು, ಇದರ ಬಾಬ್ತು ಖಾತೆ ಹಾಗೂ ಜಾಗದ ಬಾಬ್ತು ಎನ್ಒಸಿ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಕೇಶವಮೂರ್ತಿ ₹ 1ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.<br />ಇದಕ್ಕೆ ಒಪ್ಪಿದ್ದ ಹರೀಶ್ ಈ ಹಿಂದೆಯೇ ₹ 5 ಸಾವಿರ ಮುಂಗಡ ನೀಡಿದ್ದು, ಮಂಗಳವಾರ ₹70 ಸಾವಿರದೊಂದಿಗೆ ಕಚೇರಿಗೆ ಬಂದು ಹಣ ನೀಡಿದ ವೇಳೆ ಆತನೊಂದಿಗೆ ಹಾಜರಿದ್ದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಪಿಡಿಒ ಅವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.</p>.<p>ಭ್ರಷ್ಟಾಚಾರ ನಿಗ್ರಹದಳದ ಶಿವಮೊಗ್ಗ ವಿಭಾಗದ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ವಸಂತಕುಮಾರ್, ಇಮ್ರಾನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>