ಘಟನೆ ವಿವರ: ಹೊಸನಗರ ತಾಲ್ಲೂಕಿನ ಹರೀಶ ಎಂಬುವರು ಬಿಳಿಕಿ ತಾಂಡಾದಲ್ಲಿ ಜಮೀನು ಹೊಂದಿದ್ದು, ಇದರ ಬಾಬ್ತು ಖಾತೆ ಹಾಗೂ ಜಾಗದ ಬಾಬ್ತು ಎನ್ಒಸಿ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಕೇಶವಮೂರ್ತಿ ₹ 1ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.
ಇದಕ್ಕೆ ಒಪ್ಪಿದ್ದ ಹರೀಶ್ ಈ ಹಿಂದೆಯೇ ₹ 5 ಸಾವಿರ ಮುಂಗಡ ನೀಡಿದ್ದು, ಮಂಗಳವಾರ ₹70 ಸಾವಿರದೊಂದಿಗೆ ಕಚೇರಿಗೆ ಬಂದು ಹಣ ನೀಡಿದ ವೇಳೆ ಆತನೊಂದಿಗೆ ಹಾಜರಿದ್ದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಪಿಡಿಒ ಅವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.