<p><strong>ಭದ್ರಾವತಿ</strong>: ಆಕಾಶವಾಣಿ ಭದ್ರಾವತಿಯ ವಜ್ರಮಹೋತ್ಸವ ಫೆ.7ರಂದು ನಡೆಯುತ್ತಿದೆ. ಅದರ ಸ್ಮರಣೆಗಾಗಿ ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೇಳುಗರಿಗೆ ಸಣ್ಣಕಥೆ ಹಾಗೂ ಪಾಕಸ್ಪರ್ಧೆ ಏರ್ಪಡಿಸಲಾಗಿದೆ.</p>.<p>16 ವರ್ಷ ಮೇಲ್ಪಟ್ಟ ಆಸಕ್ತರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಾರ್ವಜನಿಕರು ಜನವರಿ 25ರ ಒಳಗೆ 4 ಪುಟಕ್ಕೆ ಮೀರದಂತೆ (500 ಶಬ್ದ) ಸಣ್ಣ ಕಥೆಯನ್ನು ಬರೆಯಬಹುದು ಹಾಗೂ ವಿವಿಧ ರೀತಿಯ ಖಾದ್ಯ, ಭಕ್ಷ್ಯಗಳನ್ನು ತಯಾರಿಸುವ ಸಾಮಗ್ರಿ ಹಾಗೂ ವಿಧಾನ ಒಳಗೊಂಡ ಲೇಖನವನ್ನು ಬರೆದು ನಿಲಯ ನಿರ್ದೇಶಕರು, ಆಕಾಶವಾಣಿ, ಜೆ.ಪಿ.ಎಸ್.ಕಾಲೋನಿ, ಭದ್ರಾವತಿ 577302 ವಿಳಾಸಕ್ಕೆ ಕಳುಹಿಸಬಹುದು. ಇಲ್ಲವೆ ಇ-ಮೇಲ್ airbdvt@gmail.com ಗೆ ಕಳುಹಿಸಬಹುದು. ಮೊದಲ 3 ಸ್ಥಾನಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಆಕಾಶವಾಣಿ ಭದ್ರಾವತಿ ಕೇಂದ್ರದ ಮುಖ್ಯಸ್ಥ ಎಸ್.ಆರ್.ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಜ.14ಕ್ಕೆ: ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಭದ್ರಾವತಿ ಆಕಾಶವಾಣಿಯ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲೆಯ ಅಭಿವೃದ್ಧಿಗೆ ಕೈಗೊಂಡ ಕಾರ್ಯಕ್ರಮದ ಚಿತ್ರಣ ನೀಡಲಿದ್ದಾರೆ. ಜ.14ರ ಮಂಗಳವಾರ ಬೆಳಿಗ್ಗೆ 9.15 ರಿಂದ 10 ಗಂಟೆಯವರೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ</strong>: ಆಕಾಶವಾಣಿ ಭದ್ರಾವತಿಯ ವಜ್ರಮಹೋತ್ಸವ ಫೆ.7ರಂದು ನಡೆಯುತ್ತಿದೆ. ಅದರ ಸ್ಮರಣೆಗಾಗಿ ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೇಳುಗರಿಗೆ ಸಣ್ಣಕಥೆ ಹಾಗೂ ಪಾಕಸ್ಪರ್ಧೆ ಏರ್ಪಡಿಸಲಾಗಿದೆ.</p>.<p>16 ವರ್ಷ ಮೇಲ್ಪಟ್ಟ ಆಸಕ್ತರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಾರ್ವಜನಿಕರು ಜನವರಿ 25ರ ಒಳಗೆ 4 ಪುಟಕ್ಕೆ ಮೀರದಂತೆ (500 ಶಬ್ದ) ಸಣ್ಣ ಕಥೆಯನ್ನು ಬರೆಯಬಹುದು ಹಾಗೂ ವಿವಿಧ ರೀತಿಯ ಖಾದ್ಯ, ಭಕ್ಷ್ಯಗಳನ್ನು ತಯಾರಿಸುವ ಸಾಮಗ್ರಿ ಹಾಗೂ ವಿಧಾನ ಒಳಗೊಂಡ ಲೇಖನವನ್ನು ಬರೆದು ನಿಲಯ ನಿರ್ದೇಶಕರು, ಆಕಾಶವಾಣಿ, ಜೆ.ಪಿ.ಎಸ್.ಕಾಲೋನಿ, ಭದ್ರಾವತಿ 577302 ವಿಳಾಸಕ್ಕೆ ಕಳುಹಿಸಬಹುದು. ಇಲ್ಲವೆ ಇ-ಮೇಲ್ airbdvt@gmail.com ಗೆ ಕಳುಹಿಸಬಹುದು. ಮೊದಲ 3 ಸ್ಥಾನಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಆಕಾಶವಾಣಿ ಭದ್ರಾವತಿ ಕೇಂದ್ರದ ಮುಖ್ಯಸ್ಥ ಎಸ್.ಆರ್.ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಜ.14ಕ್ಕೆ: ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಭದ್ರಾವತಿ ಆಕಾಶವಾಣಿಯ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲೆಯ ಅಭಿವೃದ್ಧಿಗೆ ಕೈಗೊಂಡ ಕಾರ್ಯಕ್ರಮದ ಚಿತ್ರಣ ನೀಡಲಿದ್ದಾರೆ. ಜ.14ರ ಮಂಗಳವಾರ ಬೆಳಿಗ್ಗೆ 9.15 ರಿಂದ 10 ಗಂಟೆಯವರೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>