<p><strong>ಆನಂದಪುರ:</strong> ಅಕ್ರಮವಾಗಿ ಹಣ ಸಂಪಾದಿಸಿ, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿ ಶಾಸಕರ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಸಾಗರ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ಅವರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ್ ಹೊನಗೋಡು ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು. </p>.<p>ಅವರು ಆನಂದಪುರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.</p>.<p>‘ಗಣಪತಿ ಹಬ್ಬದಲ್ಲಿ ಬಿಟ್ಟಿ ಹಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸುವ ನೀನು, ಬೀಟೆ ಹಾಗೂ ಸಾಗುವಾನಿ ನಾಟ ಮಾರಿ, ಅಕ್ರಮ ಮರಳು ಸಾಗಾಟ ಮಾಡಿರುವ ಹಣ ಬಿಟ್ಟಿಯಲ್ಲವೇ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.</p>.<p>‘ಇತ್ತೀಚೆಗೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಒಬ್ಬೊರಿಗೆ ₹4ರಿಂದ ₹5 ಲಕ್ಷ ನೀಡಿದ್ದಿರಲ್ಲಾ ಅದು ಬಿಟ್ಟಿಯಲ್ಲವೇ? ನಿಮ್ಮ ಅಕ್ರಮಗಳ ಬಗ್ಗೆ ಒಂದು ದೊಡ್ಡ ಪಟ್ಟಿಯೇ ಇದೆ. ಹೀಗಿರುವಾಗ ಶಾಸಕರ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ. ಅಭಿವೃದ್ದಿ, ಅಕ್ರಮಗಳ ಬಗ್ಗೆ ನೇರವಾಗಿ ಮಾತನಾಡೋಣ’ ಎಂದು ಪಂಥ್ವಾಹ್ವಾನ ನೀಡಿದರು.</p>.<p>ಶಾಸಕ ಬೇಳೂರು ಕೃಪಾಕಟಾಕ್ಷದಿಂದಲೇ ಗೆದ್ದ ನಿಮಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರ್ ಪ್ರಶ್ನೆ ಮಾಡಿದರು.</p>.<p>‘ಬಿಜೆಪಿಯವರು ಹಬ್ಬ, ಧಾರ್ಮಿಕ ಕಾರ್ಯಕ್ರಮಗಳ ದುರ್ಲಾಭ ಪಡೆಯುವ ಸಾಧ್ಯತೆ ಇದೆ. ಗಣಪತಿ ಹಬ್ಬದಲ್ಲಿ ಗಲಾಟೆ ಆಗುತ್ತದೆ ಎಂದು ರತ್ನಾಕರ್ ಅವರೇ ಹೇಳಿರುವ ಕಾರಣ ಪೋಲಿಸರು ಅವರ ಮೇಲೆ ಕಣ್ಣಿಡುವುದು ಸೂಕ್ತ’ ಎಂದರು. </p>.<p>ಆಚಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಲಿಮುಲ್ಲಾ ಖಾನ್, ಪ್ರಮುಖರಾದ ಉಮೇಶ್ ಎನ್., ಗಜೇಂದ್ರ, ಶರತ್ ನಾಗಪ್ಪ, ಅಬ್ದುಲ್ ರಜಾಕ್, ನಜರುಲ್ಲಾ ಖಾನ್, ಲಿಂಗರಾಜ್, ರಹಮತ್ ವುಲ್ಲಾ, ವಿಜಯ್ ಕುಮಾರ್, ಅಶ್ವಿನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನಂದಪುರ:</strong> ಅಕ್ರಮವಾಗಿ ಹಣ ಸಂಪಾದಿಸಿ, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿ ಶಾಸಕರ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಸಾಗರ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ಅವರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ್ ಹೊನಗೋಡು ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು. </p>.<p>ಅವರು ಆನಂದಪುರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.</p>.<p>‘ಗಣಪತಿ ಹಬ್ಬದಲ್ಲಿ ಬಿಟ್ಟಿ ಹಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸುವ ನೀನು, ಬೀಟೆ ಹಾಗೂ ಸಾಗುವಾನಿ ನಾಟ ಮಾರಿ, ಅಕ್ರಮ ಮರಳು ಸಾಗಾಟ ಮಾಡಿರುವ ಹಣ ಬಿಟ್ಟಿಯಲ್ಲವೇ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.</p>.<p>‘ಇತ್ತೀಚೆಗೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಒಬ್ಬೊರಿಗೆ ₹4ರಿಂದ ₹5 ಲಕ್ಷ ನೀಡಿದ್ದಿರಲ್ಲಾ ಅದು ಬಿಟ್ಟಿಯಲ್ಲವೇ? ನಿಮ್ಮ ಅಕ್ರಮಗಳ ಬಗ್ಗೆ ಒಂದು ದೊಡ್ಡ ಪಟ್ಟಿಯೇ ಇದೆ. ಹೀಗಿರುವಾಗ ಶಾಸಕರ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ. ಅಭಿವೃದ್ದಿ, ಅಕ್ರಮಗಳ ಬಗ್ಗೆ ನೇರವಾಗಿ ಮಾತನಾಡೋಣ’ ಎಂದು ಪಂಥ್ವಾಹ್ವಾನ ನೀಡಿದರು.</p>.<p>ಶಾಸಕ ಬೇಳೂರು ಕೃಪಾಕಟಾಕ್ಷದಿಂದಲೇ ಗೆದ್ದ ನಿಮಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರ್ ಪ್ರಶ್ನೆ ಮಾಡಿದರು.</p>.<p>‘ಬಿಜೆಪಿಯವರು ಹಬ್ಬ, ಧಾರ್ಮಿಕ ಕಾರ್ಯಕ್ರಮಗಳ ದುರ್ಲಾಭ ಪಡೆಯುವ ಸಾಧ್ಯತೆ ಇದೆ. ಗಣಪತಿ ಹಬ್ಬದಲ್ಲಿ ಗಲಾಟೆ ಆಗುತ್ತದೆ ಎಂದು ರತ್ನಾಕರ್ ಅವರೇ ಹೇಳಿರುವ ಕಾರಣ ಪೋಲಿಸರು ಅವರ ಮೇಲೆ ಕಣ್ಣಿಡುವುದು ಸೂಕ್ತ’ ಎಂದರು. </p>.<p>ಆಚಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಲಿಮುಲ್ಲಾ ಖಾನ್, ಪ್ರಮುಖರಾದ ಉಮೇಶ್ ಎನ್., ಗಜೇಂದ್ರ, ಶರತ್ ನಾಗಪ್ಪ, ಅಬ್ದುಲ್ ರಜಾಕ್, ನಜರುಲ್ಲಾ ಖಾನ್, ಲಿಂಗರಾಜ್, ರಹಮತ್ ವುಲ್ಲಾ, ವಿಜಯ್ ಕುಮಾರ್, ಅಶ್ವಿನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>