ರೈತರು, ಮಧ್ಯಮ ವರ್ಗದವರ ಮಕ್ಕಳು ಶೈಕ್ಷಣಿಕ ಸಾಲ ಪಡೆದು ಮಕ್ಕಳ ವ್ಯಾಸಂಗ ಮಾಡಿಸುತ್ತಿದ್ದಾರೆ. ಆದರೆ, ವ್ಯಾಸಂಗ ಮುಗಿದ ನಂತರ ಬಹುತೇಕರು ನಿರುದ್ಯೋಗಿಗಳಾಗಿದ್ದು, ಸಾಲ ತೀರಿಸುವುದು ಅಸಾಧ್ಯವಾಗಿದೆ. ಪರಿಣಾಮವಾಗಿ ಸಾಲ ಪಡೆಯುವಾಗ ಭದ್ರತೆಗಾಗಿ ನೀಡಿದ್ದ ರೈತ ಹಾಗೂ ಮಧ್ಯಮ ವರ್ಗದವರ ಜಮೀನು, ಮನೆ ಇತ್ಯಾದಿ ಹರಾಜು ಹಾಕಲಾಗುತ್ತಿದೆ. ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೀಗಾಗಿ ಶೈಕ್ಷಣಿಕ ಸಾಲ ಮನ್ನಾ ಮಾಡಬೇಕು ಅಥವಾ ಬಡ್ಡಿಯನ್ನಾದರೂ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.