<p><strong>ಭದ್ರಾವತಿ: </strong>ಈಚೆಗೆ ಕಾಣೆಯಾಗಿದ್ದ ಇಲ್ಲಿನಅನ್ವರ್ ಕಾಲೊನಿ ನಿವಾಸಿ ಮೆಕ್ಯಾನಿಕ್ ಜಮೀರ್ (19) ಶವ ಸೋಮವಾರ ಬೆಳಿಗ್ಗೆ ತರೀಕೆರೆ ರಸ್ತೆ ಅಂಡರ್ ಪಾಸ್ ಬಳಿಯ ಭದ್ರಾನದಿ ತಟದಲ್ಲಿ ಪತ್ತೆಯಾಗಿದೆ.</p>.<p>ಆಕ್ರೋಶಗೊಂದ ಕಾಲೊನಿಯ ನೂರಾರು ಯುವಕರು, ‘ಇದು ಕೊಲೆ. ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.</p>.<p>ಜಮೀರ್ ಕಾಣೆಯಾದ ಸಂಬಂಧ ಶನಿವಾರ ಹೊಸಮನೆ ಠಾಣೆಯಲ್ಲಿ ದೂರು ದಾಖಲಾಗಿತ್ತು.ಸೋಮವಾರ ಬೆಳಿಗ್ಗೆ ಶವ ಸಿಕ್ಕಿದ್ದು, ಆತನ ದ್ವಿಚಕ್ರ ವಾಹನ ಕೋಡಿಹಳ್ಳಿ ರಸ್ತೆಯ ಮೀನಾ ನರ್ಸಿಂಗ್ ಹೋಂ ಹಿಂಭಾಗದ ರಸ್ತೆಯಲ್ಲಿ ಸಿಕ್ಕಿದೆ ಎನ್ನಲಾಗಿದೆ.</p>.<p>ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜಮಾಯಿಸಿದ ನೂರಾರು ಯುವಕರು ಶವವನ್ನು ಆಂಬುಲೆನ್ಸ್ನಲ್ಲಿ ಇಟ್ಟುಕೊಂಡು ರಂಗಪ್ಪವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.</p>.<p>ಮಧ್ಯೆ ಪ್ರವೇಶಿಸಿದ ಪೊಲೀಸರು, ಮುಖಂಡರು ಪರಿಸ್ಥಿತಿ ತಿಳಿಗೊಳಿಸಿ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶವವನ್ನು ಸಾಗಿಸಿದರು.</p>.<p class="Subhead"><strong>ಘಟನೆ ವಿವರ: </strong>ಮೆಕ್ಯಾನಿಕ್ ಆಗಿದ್ದ ಜಮೀರ್ ಶುಕ್ರವಾರ ರಾತ್ರಿ ಟಿವಿ ಸರಿಪಡಿಸಲು ದೇವರನರಸೀಪುರ ಗ್ರಾಮದ ಮನೆಯೊಂದಕ್ಕೆ ಹೋಗಿದ್ದ. ೊಂದು ದಿನ ಆದರೂ ಬಾರದ ಕಾರಣ ಅವರ ತಾಯಿ ಹಾಗೂ ಅಂಗಡಿ ಮಾಲೀಕರು ಭಾನುವಾರ ಹೊಸಮನೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.</p>.<p>ಜಮೀರ್ ದೇವರನರಸೀಪುರ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳಿದ್ದ ದೃಶ್ಯ ಗ್ರಾಮದ ರಂಗನಾಥಸ್ವಾಮಿ ದೇವಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.</p>.<p>ಜಮೀರ್ ಕುಟುಂಬಸ್ಥರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಕೊಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.</p>.<p>‘ಶವದ ತನಿಖಾ ವರದಿ ನಂತರ ಸಿಗುವ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಬದ್ಧ’ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಮೂರ್ತೂಝಾಖಾನ್ ಹೇಳಿದರು.</p>.<p class="Subhead"><strong>ತನಿಖೆ ಚುರುಕು</strong></p>.<p>ಜಮೀರ್ ಸಾವಿನ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದಾರೆ.ಜಮೀರ್ ದ್ವಿಚಕ್ರ ವಾಹನ ಕೋಡಿಹಳ್ಳಿ ರಸ್ತೆಯಲ್ಲಿ ಸಾಗಿರುವ ದೃಶ್ಯವನ್ನು ಕಲೆ ಹಾಕಿದ್ದಾರೆ.</p>.<p>ಬೈಕ್ ಬಿದ್ದ ಜಾಗದಿಂದ ರಾಜಕಾಲುವೆ ಹೋಗಿದೆ. ಅಲ್ಲಿ ಶವ ಸಿಕ್ಕಿರುವ ಕಾರಣ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ: </strong>ಈಚೆಗೆ ಕಾಣೆಯಾಗಿದ್ದ ಇಲ್ಲಿನಅನ್ವರ್ ಕಾಲೊನಿ ನಿವಾಸಿ ಮೆಕ್ಯಾನಿಕ್ ಜಮೀರ್ (19) ಶವ ಸೋಮವಾರ ಬೆಳಿಗ್ಗೆ ತರೀಕೆರೆ ರಸ್ತೆ ಅಂಡರ್ ಪಾಸ್ ಬಳಿಯ ಭದ್ರಾನದಿ ತಟದಲ್ಲಿ ಪತ್ತೆಯಾಗಿದೆ.</p>.<p>ಆಕ್ರೋಶಗೊಂದ ಕಾಲೊನಿಯ ನೂರಾರು ಯುವಕರು, ‘ಇದು ಕೊಲೆ. ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.</p>.<p>ಜಮೀರ್ ಕಾಣೆಯಾದ ಸಂಬಂಧ ಶನಿವಾರ ಹೊಸಮನೆ ಠಾಣೆಯಲ್ಲಿ ದೂರು ದಾಖಲಾಗಿತ್ತು.ಸೋಮವಾರ ಬೆಳಿಗ್ಗೆ ಶವ ಸಿಕ್ಕಿದ್ದು, ಆತನ ದ್ವಿಚಕ್ರ ವಾಹನ ಕೋಡಿಹಳ್ಳಿ ರಸ್ತೆಯ ಮೀನಾ ನರ್ಸಿಂಗ್ ಹೋಂ ಹಿಂಭಾಗದ ರಸ್ತೆಯಲ್ಲಿ ಸಿಕ್ಕಿದೆ ಎನ್ನಲಾಗಿದೆ.</p>.<p>ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜಮಾಯಿಸಿದ ನೂರಾರು ಯುವಕರು ಶವವನ್ನು ಆಂಬುಲೆನ್ಸ್ನಲ್ಲಿ ಇಟ್ಟುಕೊಂಡು ರಂಗಪ್ಪವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.</p>.<p>ಮಧ್ಯೆ ಪ್ರವೇಶಿಸಿದ ಪೊಲೀಸರು, ಮುಖಂಡರು ಪರಿಸ್ಥಿತಿ ತಿಳಿಗೊಳಿಸಿ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶವವನ್ನು ಸಾಗಿಸಿದರು.</p>.<p class="Subhead"><strong>ಘಟನೆ ವಿವರ: </strong>ಮೆಕ್ಯಾನಿಕ್ ಆಗಿದ್ದ ಜಮೀರ್ ಶುಕ್ರವಾರ ರಾತ್ರಿ ಟಿವಿ ಸರಿಪಡಿಸಲು ದೇವರನರಸೀಪುರ ಗ್ರಾಮದ ಮನೆಯೊಂದಕ್ಕೆ ಹೋಗಿದ್ದ. ೊಂದು ದಿನ ಆದರೂ ಬಾರದ ಕಾರಣ ಅವರ ತಾಯಿ ಹಾಗೂ ಅಂಗಡಿ ಮಾಲೀಕರು ಭಾನುವಾರ ಹೊಸಮನೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.</p>.<p>ಜಮೀರ್ ದೇವರನರಸೀಪುರ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳಿದ್ದ ದೃಶ್ಯ ಗ್ರಾಮದ ರಂಗನಾಥಸ್ವಾಮಿ ದೇವಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.</p>.<p>ಜಮೀರ್ ಕುಟುಂಬಸ್ಥರು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಕೊಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.</p>.<p>‘ಶವದ ತನಿಖಾ ವರದಿ ನಂತರ ಸಿಗುವ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಬದ್ಧ’ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಮೂರ್ತೂಝಾಖಾನ್ ಹೇಳಿದರು.</p>.<p class="Subhead"><strong>ತನಿಖೆ ಚುರುಕು</strong></p>.<p>ಜಮೀರ್ ಸಾವಿನ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದಾರೆ.ಜಮೀರ್ ದ್ವಿಚಕ್ರ ವಾಹನ ಕೋಡಿಹಳ್ಳಿ ರಸ್ತೆಯಲ್ಲಿ ಸಾಗಿರುವ ದೃಶ್ಯವನ್ನು ಕಲೆ ಹಾಕಿದ್ದಾರೆ.</p>.<p>ಬೈಕ್ ಬಿದ್ದ ಜಾಗದಿಂದ ರಾಜಕಾಲುವೆ ಹೋಗಿದೆ. ಅಲ್ಲಿ ಶವ ಸಿಕ್ಕಿರುವ ಕಾರಣ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>