<p><strong>ಸಾಗರ:</strong> ‘ಭಾರತೀಯ ಪರಂಪರೆಯಲ್ಲಿ ಕುಟುಂಬ ವ್ಯವಸ್ಥೆಯ ಮೌಲ್ಯಗಳಿಗೆ ದೊಡ್ಡ ಸ್ಥಾನವಿದೆ. ನಮ್ಮ ಕುಟುಂಬ ವ್ಯವಸ್ಥೆಯನ್ನು ಉತ್ತಮಪಡಿಸಿ ಭಾವನಾತ್ಮಕ ಸಂಬಂಧಗಳನ್ನು ಬಲಪಡಿಸಿಕೊಳ್ಳದೆ ಇದ್ದರೆ ಶಾಲೆಗಳನ್ನು ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳನ್ನಾಗಿ ಪರಿವರ್ತಿಸಬೇಕಾಗುತ್ತದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.</p>.<p>ಸಮೀಪದ ಮಡಸೂರು ಲಿಂಗದಹಳ್ಳಿ ಗ್ರಾಮದಲ್ಲಿ ಸಾವಿತ್ರಮ್ಮ ಮತ್ತು ಎಲ್.ಟಿ.ತಿಮ್ಮಪ್ಪ ಹೆಗಡೆ ಪ್ರತಿಷ್ಠಾನ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ಅವರ ಆತ್ಮಕಥನ ‘ನಾನು’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಎಲ್.ಟಿ.ತಿಮ್ಮಪ್ಪ ಹೆಗಡೆ ಅವರು ದೀರ್ಘಕಾಲ ರಾಜಕೀಯ, ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಲೇ ಕೌಟುಂಬಿಕವಾದ ಮಾನವೀಯ ಸಂಬಂಧಗಳನ್ನು ಉಳಿಸಿಕೊಂಡಿದ್ದಾರೆ. ಈ ಪ್ರವೃತ್ತಿ ಅವರ ಜೀವನದಲ್ಲಿ ಸಾರ್ಥಕತೆ ಮೂಡಿಸಲು ಕಾರಣವಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಸಹಕಾರ, ರಾಜಕೀಯ, ಶಿಕ್ಷಣ, ಧಾರ್ಮಿಕ ಕ್ಷೇತ್ರದಲ್ಲಿ ಒಳಿತನ್ನು ಮಾಡಬೇಕು, ಒಳಿತು ಆಗಬೇಕು ಎಂಬ ನಂಬಿಕೆ ಹಾಗೂ ಬದ್ಧತೆಯಿಂದ ಎಲ್.ಟಿ.ಹೆಗಡೆ ಅವರು ಕೆಲಸ ಮಾಡಿದ್ದಾರೆ. ರಾಜಕೀಯ ವ್ಯವಸ್ಥೆಗೆ ಗೌರವ ತಂದ ಬೆರಳಣಿಕೆಯ ವ್ಯಕ್ತಿಗಳಲ್ಲಿ ಎಲ್.ಟಿ. ಕೂಡ ಒಬ್ಬರಾಗಿದ್ದಾರೆ’ ಎಂದರು.</p>.<p>‘ಇಂತವರನ್ನು ಮಾರ್ಗದರ್ಶಕರಾಗಿ ಅನುಸರಿಸಬಹುದು ಎಂಬ ಮೇಲ್ಪಂಕ್ತಿಯ ವ್ಯಕ್ತಿಗಳು ನಮ್ಮ ನಡುವೆ ವಿರಳವಾಗುತ್ತಿದ್ದಾರೆ. ಪ್ರತಿಫಲದ ಅಪೇಕ್ಷೆ ಇಲ್ಲದೆ ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದ ಎಲ್.ಟಿ. ಹೆಗಡೆ ಅವರನ್ನು ನಿಸ್ಸಂಶಯವಾಗಿ ಮೇಲ್ಪಂಕ್ತಿಯ ವ್ಯಕ್ತಿ ಎಂದು ಗುರುತಿಸಬಹುದು’ ಎಂದರು.</p>.<p>‘ನಾನು’ ಆತ್ಮಕಥೆ ಉತ್ಕಟವಾದ ಭಾವನೆಗಳನ್ನು ಒಳಗೊಂಡಿರುವ ಜೊತೆಗೆ ಸರಾಗವಾಗಿ ಓದಿಸಿಕೊಂಡು ಹೋಗುವ ಗುಣವನ್ನೂ ಹೊಂದಿದೆ. ಕೃತಿಯ ಉದ್ದಕ್ಕೂ ಎಲ್.ಟಿ. ಅವರು ಸಾರ್ವಜನಿಕರ ಬದುಕಿನಲ್ಲಿ ತೋರಿರುವ ಶ್ರದ್ಧೆ, ಪ್ರಾಮಾಣಿಕತೆ, ಬದ್ಧತೆಯ ದರ್ಶನವಾಗುತ್ತದೆ’ ಎಂದರು.</p>.<p>‘ಬುದ್ದಿವಂತಿಕೆ, ವಿಚಾರವಂತಿಕೆಯ ಜೊತೆಗೆ ಆಚಾರವಂತಿಕೆಯನ್ನೂ ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಂಡ ಅಪರೂಪದ ವ್ಯಕ್ತಿತ್ವ ಎಲ್.ಟಿ. ಅವರದ್ದು. ಅವರ ಆತ್ಮಕಥೆ ಅನ್ಯ ನಿರೂಪಿತವಾಗಿದ್ದರೂ, ಅವರೇ ಬರೆದಿರುವ ರೀತಿಯಲ್ಲಿ ಇರುವುದು ಕೃತಿಯ ವಿಶೇಷವಾಗಿದೆ’ ಎಂದುಕೃತಿ ಬಿಡುಗಡೆ ಮಾಡಿದ ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.</p>.<p>ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ, ಆತ್ಮಕಥೆಯನ್ನು ನಿರೂಪಿಸಿರುವ ಪತ್ರಕರ್ತ ಮಾ.ವೆಂ.ಸ. ಪ್ರಸಾದ್ ಮಾತನಾಡಿದರು. ಸಾವಿತ್ರಮ್ಮ ಎಲ್.ಟಿ.ತಿಮ್ಮಪ್ಪ ಹೆಗಡೆ ಇದ್ದರು. ನಿಧಿ ರಮೇಶ್ ಪ್ರಾರ್ಥಿಸಿದರು. ಎಲ್.ಟಿ.ತಿಮ್ಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವರುಣ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ‘ಭಾರತೀಯ ಪರಂಪರೆಯಲ್ಲಿ ಕುಟುಂಬ ವ್ಯವಸ್ಥೆಯ ಮೌಲ್ಯಗಳಿಗೆ ದೊಡ್ಡ ಸ್ಥಾನವಿದೆ. ನಮ್ಮ ಕುಟುಂಬ ವ್ಯವಸ್ಥೆಯನ್ನು ಉತ್ತಮಪಡಿಸಿ ಭಾವನಾತ್ಮಕ ಸಂಬಂಧಗಳನ್ನು ಬಲಪಡಿಸಿಕೊಳ್ಳದೆ ಇದ್ದರೆ ಶಾಲೆಗಳನ್ನು ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳನ್ನಾಗಿ ಪರಿವರ್ತಿಸಬೇಕಾಗುತ್ತದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.</p>.<p>ಸಮೀಪದ ಮಡಸೂರು ಲಿಂಗದಹಳ್ಳಿ ಗ್ರಾಮದಲ್ಲಿ ಸಾವಿತ್ರಮ್ಮ ಮತ್ತು ಎಲ್.ಟಿ.ತಿಮ್ಮಪ್ಪ ಹೆಗಡೆ ಪ್ರತಿಷ್ಠಾನ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ಅವರ ಆತ್ಮಕಥನ ‘ನಾನು’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಎಲ್.ಟಿ.ತಿಮ್ಮಪ್ಪ ಹೆಗಡೆ ಅವರು ದೀರ್ಘಕಾಲ ರಾಜಕೀಯ, ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಲೇ ಕೌಟುಂಬಿಕವಾದ ಮಾನವೀಯ ಸಂಬಂಧಗಳನ್ನು ಉಳಿಸಿಕೊಂಡಿದ್ದಾರೆ. ಈ ಪ್ರವೃತ್ತಿ ಅವರ ಜೀವನದಲ್ಲಿ ಸಾರ್ಥಕತೆ ಮೂಡಿಸಲು ಕಾರಣವಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಸಹಕಾರ, ರಾಜಕೀಯ, ಶಿಕ್ಷಣ, ಧಾರ್ಮಿಕ ಕ್ಷೇತ್ರದಲ್ಲಿ ಒಳಿತನ್ನು ಮಾಡಬೇಕು, ಒಳಿತು ಆಗಬೇಕು ಎಂಬ ನಂಬಿಕೆ ಹಾಗೂ ಬದ್ಧತೆಯಿಂದ ಎಲ್.ಟಿ.ಹೆಗಡೆ ಅವರು ಕೆಲಸ ಮಾಡಿದ್ದಾರೆ. ರಾಜಕೀಯ ವ್ಯವಸ್ಥೆಗೆ ಗೌರವ ತಂದ ಬೆರಳಣಿಕೆಯ ವ್ಯಕ್ತಿಗಳಲ್ಲಿ ಎಲ್.ಟಿ. ಕೂಡ ಒಬ್ಬರಾಗಿದ್ದಾರೆ’ ಎಂದರು.</p>.<p>‘ಇಂತವರನ್ನು ಮಾರ್ಗದರ್ಶಕರಾಗಿ ಅನುಸರಿಸಬಹುದು ಎಂಬ ಮೇಲ್ಪಂಕ್ತಿಯ ವ್ಯಕ್ತಿಗಳು ನಮ್ಮ ನಡುವೆ ವಿರಳವಾಗುತ್ತಿದ್ದಾರೆ. ಪ್ರತಿಫಲದ ಅಪೇಕ್ಷೆ ಇಲ್ಲದೆ ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದ ಎಲ್.ಟಿ. ಹೆಗಡೆ ಅವರನ್ನು ನಿಸ್ಸಂಶಯವಾಗಿ ಮೇಲ್ಪಂಕ್ತಿಯ ವ್ಯಕ್ತಿ ಎಂದು ಗುರುತಿಸಬಹುದು’ ಎಂದರು.</p>.<p>‘ನಾನು’ ಆತ್ಮಕಥೆ ಉತ್ಕಟವಾದ ಭಾವನೆಗಳನ್ನು ಒಳಗೊಂಡಿರುವ ಜೊತೆಗೆ ಸರಾಗವಾಗಿ ಓದಿಸಿಕೊಂಡು ಹೋಗುವ ಗುಣವನ್ನೂ ಹೊಂದಿದೆ. ಕೃತಿಯ ಉದ್ದಕ್ಕೂ ಎಲ್.ಟಿ. ಅವರು ಸಾರ್ವಜನಿಕರ ಬದುಕಿನಲ್ಲಿ ತೋರಿರುವ ಶ್ರದ್ಧೆ, ಪ್ರಾಮಾಣಿಕತೆ, ಬದ್ಧತೆಯ ದರ್ಶನವಾಗುತ್ತದೆ’ ಎಂದರು.</p>.<p>‘ಬುದ್ದಿವಂತಿಕೆ, ವಿಚಾರವಂತಿಕೆಯ ಜೊತೆಗೆ ಆಚಾರವಂತಿಕೆಯನ್ನೂ ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಂಡ ಅಪರೂಪದ ವ್ಯಕ್ತಿತ್ವ ಎಲ್.ಟಿ. ಅವರದ್ದು. ಅವರ ಆತ್ಮಕಥೆ ಅನ್ಯ ನಿರೂಪಿತವಾಗಿದ್ದರೂ, ಅವರೇ ಬರೆದಿರುವ ರೀತಿಯಲ್ಲಿ ಇರುವುದು ಕೃತಿಯ ವಿಶೇಷವಾಗಿದೆ’ ಎಂದುಕೃತಿ ಬಿಡುಗಡೆ ಮಾಡಿದ ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.</p>.<p>ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ, ಆತ್ಮಕಥೆಯನ್ನು ನಿರೂಪಿಸಿರುವ ಪತ್ರಕರ್ತ ಮಾ.ವೆಂ.ಸ. ಪ್ರಸಾದ್ ಮಾತನಾಡಿದರು. ಸಾವಿತ್ರಮ್ಮ ಎಲ್.ಟಿ.ತಿಮ್ಮಪ್ಪ ಹೆಗಡೆ ಇದ್ದರು. ನಿಧಿ ರಮೇಶ್ ಪ್ರಾರ್ಥಿಸಿದರು. ಎಲ್.ಟಿ.ತಿಮ್ಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವರುಣ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>