‘ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ನಂತರ ಕರ್ನಾಟಕ ರಾಜ್ಯದಲ್ಲಿ ಸಾಗಿ ಬಂದ ಹೋರಾಟದ ಚಿತ್ರಣವನ್ನು ಶಿವಮೊಗ್ಗ ಜಿಲ್ಲೆಯ ಕೇಂದ್ರವಾಗಿಟ್ಟುಕೊಂಡು ಈ ಪುಸ್ತಕ ಬರೆದಿದ್ದೇನೆ. ಶಿವಮೊಗ್ಗ ಜಿಲ್ಲೆಯಲ್ಲಿ ರೈತ ಸಂಘದ ಜತೆಗೆ ಕಾಗೋಡು ಚಳವಳಿ, ದಲಿತ ಚಳವಳಿ ಸೇರಿ ಹಲವು ಹೋರಾಟಗಳು ನಡೆದಿವೆ. ಇದನ್ನು ಕೂಡ ಪೂರಕವಾಗಿ ಉಲ್ಲೇಖಿಸಿರುವೆ. ಇಲ್ಲಿ ಯಾವುದನ್ನೂ ಮರೆಮಾಚಿಲ್ಲ. ರೈತ ಸಂಘದಲ್ಲಿ ತಪ್ಪಿದ ಹೆಜ್ಜೆಗಳ ಗುರುತು, ಇಬ್ಭಾಗ, ವಿಚಾರದ ಭಿನ್ನಾಭಿಪ್ರಾಯಗಳು, ರಾಜಕೀಯದ ವಿಷಯಗಳು ಎಲ್ಲವೂ ಇವೆ. ನನ್ನ ತಪ್ಪು, ಒಪ್ಪುಗಳನ್ನು ಯಾವುದೇ ಮುಚ್ಚು ಮರೆ ಇಲ್ಲದೇ 340 ಪುಟದ ಈ ಪುಸ್ತಕದಲ್ಲಿ ಕಾಣಿಸಿದ್ದೇನೆ. ನನ್ನ ಅಭಿಪ್ರಾಯಗಳನ್ನು ಒಂದೆಡೆ ಕಲೆಹಾಕಿ ಇದನ್ನು ಪುಸ್ತಕ ರೂಪದಲ್ಲಿ ಹೊರತರಲಾಗುತ್ತಿದೆ. ಗಿರೀಶ್ ತಾಳಿಕಟ್ಟೆ ಇದರ ಜವಾಬ್ದಾರಿ ಹೊತ್ತಿದ್ದಾರೆ’ ಎಂದರು.