ಆಗ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಗದ್ದಲ, ಗಲಾಟೆ ನಡೆಯಿತು. ಸಭೆಯಲ್ಲಿ ಗಲಾಟೆ ನಡೆಯುವುದನ್ನು ಸಂದೀಪ್ ಎಂಬ ಗ್ರಾಮಸ್ಥ ವಿಡಿಯೊ ಮಾಡುತ್ತಿದ್ದರು. ಉಪಾಧ್ಯಕ್ಷ ತೊಗರೆ ಕೃಷ್ಣಮೂರ್ತಿ ವಿಡಿಯೊ ಮಾಡದಂತೆ ಎಚ್ಚರಿಸಿದ್ದಾರೆ. ಆಗ ಸಂದೀಪ್ ಮತ್ತು ಉಪಾಧ್ಯಕ್ಷ ತೊಗರೆ ಕೃಷ್ಣಮೂರ್ತಿ ಅವರ ನಡುವೆ ಪರಸ್ಪರ ಹೊಡೆದಾಟ ನಡೆದಿದೆ ಎನ್ನಲಾಗಿದೆ.