ಶಿಕಾರಿಪುರ: ಪಟ್ಟಣದ ಶಿವಮೊಗ್ಗ ರಸ್ತೆಯ ಕೋರ್ಟ್ ಎದುರುಬುಧವಾರ ಮುಂಜಾನೆ ಮದುವೆಗೆ ತೆರಳುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ವರನ ಸಹೋದರ ಸ್ಥಳದಲ್ಲಿಯೇಮೃತಪಟ್ಟಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೆಳಗಾಲಪೇಟೆ ನಿವಾಸಿ ಸಂದೀಪ್ (34) ಮೃತಟಪಟ್ಟವರು. ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಏ.21ರಂದು ನಡೆಯಲಿದ್ದ ಅವರ ಸಹೋದರನ ಮದುವೆಗೆ ತೆರಳುತ್ತಿದ್ದರು.
ಕಾರಿನಲ್ಲಿ ಸಂದೀಪ್ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಸಂದೀಪ್ ಪತ್ನಿ ಜಾನಕಿ, ಸಹೋದರ ಮದುಮಗ ಪ್ರದೀಪ್, ಸಂಬಂಧಿ ಮಂಗಳ ಗಾಯಗೊಂಡಿದ್ದಾರೆ. ಜಾನಕಿ ಹಾಗೂ ಮಂಗಳ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.