‘ಇಂತಹ ಕೃತ್ಯಗಳು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತವೆ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗುತ್ತಿದೆ. ಬಿಜೆಪಿ ಮತ್ತು ಅದರ ಪರಿವಾರದ ಸಂಘಟನೆಗಳು ಜನಪರ ಚಳವಳಿಗಳ ನಾಯಕರನ್ನೇ ಗುರಿ ಮಾಡಿವೆ. ನಿರಂತರ ದಾಳಿ ನಡೆಸುವ, ಅಧಿಕಾರ ದುರುಪಯೋಗಪಡಿಸಿಕೊಂಡು ಸುಳ್ಳು ಕೇಸುಗಳನ್ನು ದಾಖಲಿಸುವ, ಜೈಲಿನಲ್ಲಿಡುವ ಕೆಲಸ ಮಾಡಲಾಗುತ್ತಿವೆ’ ಎಂದು ಮುಖಂಡರಾದ ಕೆ.ಟಿ. ಗಂಗಾಧರ್. ಎಚ್.ಆರ್. ಬಸವರಾಜಪ್ಪ, ಎಂ.ಶ್ರೀಕಾಂತ್, ಕೆ.ಎಲ್.ಅಶೋಕ್, ಕೆ.ಪಿ.ಶ್ರೀಪಾಲ, ಎಂ.ಗುರುಮೂರ್ತಿ, ಎನ್.ರಮೇಶ್, ಎಚ್.ಟಿ.ಹಾಲೇಶಪ್ಪ, ಎಚ್.ಸಿ.ಯೋಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.