<p>ತೀರ್ಥಹಳ್ಳಿ: 23 ವರ್ಷಗಳ ನಂತರ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಗದ್ದುಗೆಯನ್ನು ಕಾಂಗ್ರೆಸ್ ಹಿಡಿಯುವ ಮೂಲಕ ಬಿಜೆಪಿ ಓಟಕ್ಕೆ ತಡೆಯೊಡ್ಡಿದೆ.</p>.<p>ಪಟ್ಟಣದ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಎಣಿಕೆ ಕಾರ್ಯ ನಡೆಯಿತು. ಕೇವಲ 2 ಗಂಟೆಯೊಳಗೆ ಎಲ್ಲ 15 ವಾರ್ಡ್ಗಳ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ಪ್ರಕಟಿಸಿದರು.</p>.<p>ಕಾಂಗ್ರೆಸ್ 9 ಸ್ಥಾನ ಗೆಲ್ಲುವ ಮೂಲಕ ಬಹುಮತ ಪಡೆದಿದೆ. ಬಿಜೆಪಿ 6 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ, ಶಿವಮೊಗ್ಗ ರಂಗಾಯಣ ನಿರ್ದೇಶಕ ಬಿಜೆಪಿಯ ಸಂದೇಶ ಜವಳಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಂಗ್ರೆಸ್ನ ರಹಮತ್ ಉಲ್ಲಾ ಅಸಾದಿ ಸತತ 4ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.</p>.<p>ಬಿಜೆಪಿಯ ಸೊಪ್ಪುಗುಡ್ಡೆ ರಾಘವೇಂದ್ರ ಅವರು 3ನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ನ ಗೀತಾ ರಮೇಶ್, ಶಬನಮ್ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ.</p>.<p class="Subhead">ಬಿಜೆಪಿ ಮುಖಂಡ, ಮಾಜಿ ಸದಸ್ಯ ಜೆ.ಮಂಜುನಾಥಶೆಟ್ಟಿ, ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಆರ್.ರಾಘವೇಂದ್ರ ಶೆಟ್ಟಿ ಪರಾಭವಗೊಂಡಿದ್ದಾರೆ. ಸತತ 23 ವರ್ಷಗಳ ಬಿಜೆಪಿ ಆಡಳಿತಕ್ಕೆ ತೆರೆಬಿದ್ದಂತಾಗಿದೆ. 9 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದ್ದು, ಕೇವಲ 6 ಸ್ಥಾನಕ್ಕೆ ಬಿಜೆಪಿ ತೃಪ್ತಿಪಟ್ಟುಕೊಳ್ಳುವಂತಾಗಿದೆ.</p>.<p>ವಿಜೇತರ ವಿವರ ಇಂತಿದೆ:</p>.<p class="Subhead">ವಾರ್ಡ್ ನಂ. 1: ಸೊಪ್ಪುಗುಡ್ಡೆ ರಾಘವೇಂದ್ರ (ಬಿಜೆಪಿ)– 278, ಸಮೀಪದ ಸ್ಪರ್ಧಿ– ಎನ್.ಕೆ.ಪ್ರದೀಪ್ (ಕಾಂಗ್ರೆಸ್), ಪಡೆದ ಮತ 94, ಗೆಲುವಿನ ಅಂತರ 184 ಮತ.</p>.<p class="Subhead">ವಾರ್ಡ್ ನಂ. 2: ಯತಿರಾಜ್ (ನವೀನ್), (ಬಿಜೆಪಿ)– 422, ಬಿ.ಆರ್.ರಾಘವೇಂದ್ರ ಶೆಟ್ಟಿ (ಕಾಂಗ್ರೆಸ್), ಪಡೆದ ಮತ 372, ಗೆಲುವಿನ ಅಂತರ 50.</p>.<p class="Subhead">ವಾರ್ಡ್ ನಂ. 3: ರತ್ನಾಕರ ಶೆಟ್ಟಿ (ದತ್ತಣ್ಣ), (ಕಾಂಗ್ರೆಸ್)– 340, ಸಮೀಪದ ಸ್ಪರ್ಧಿ– ನವೀನ್ ಕುಮಾರ್ (ಬಿಜೆಪಿ), ಪಡೆದ ಮತ 213, ಗೆಲುವಿನ ಅಂತರ 127.</p>.<p class="Subhead">ವಾರ್ಡ್ ನಂ. 4: ನಮ್ರತ್ ರಮೇಶ್ (ಕಾಂಗ್ರೆಸ್)– 349,ಸಮೀಪದ ಸ್ಪರ್ಧಿ– ಸಿ.ಶ್ರೀನಿವಾಸ್ (ಬಿಜೆಪಿ), ಪಡೆದ ಮತ 129, ಗೆಲುವಿನ ಅಂತರ 220.</p>.<p class="Subhead">ವಾರ್ಡ್ ನಂ. 5: ಸುಶೀಲಾ ಶೆಟ್ಟಿ (ಕಾಂಗ್ರೆಸ್)– 319, ಸಮೀಪದ ಸ್ಪರ್ಧಿ– ಕೆ.ವಿದ್ಯಾವತಿ (ಬಿಜೆಪಿ), ಪಡೆದ ಮತ 250, ಗೆಲುವಿನ ಅಂತರ 69.</p>.<p class="Subhead">ವಾರ್ಡ್ ನಂ. 6: ಶಬನಮ್ (ಕಾಂಗ್ರೆಸ್) ಪಡೆದ ಮತ 302, ಸಮೀಪದ ಸ್ಪರ್ಧಿ– ಸುಷ್ಮಾ ಮಹೇಶ್ (ಬಿಜೆಪಿ), ಪಡೆದ ಮತ 195, ಗೆಲುವಿನ ಅಂತರ 7.</p>.<p class="Subhead">ವಾರ್ಡ್ ನಂ. 7: ಜಯಪ್ರಕಾಕಾಶ್ ಶೆಟ್ಟಿ (ಜೈಯು) (ಕಾಂಗ್ರೆಸ್)– 253,ಸಮೀಪದ<br />ಸ್ಪರ್ಧಿ– ಜೆ.ಮಂಜುನಾಥಶೆಟ್ಟಿ (ಬಿಜೆಪಿ), ಪಡೆದ ಮತ 222, ಗೆಲುವಿನ ಅಂತರ 31.</p>.<p class="Subhead">ವಾರ್ಡ್ ನಂ. 8: ಜ್ಯೋತಿ ಗಣೇಶ್ (ಬಿಜೆಪಿ)– 275, ಸಮೀಪದ ಸ್ಪರ್ಧಿ– ಟಿ.ಸಿ.ವಿಜಯ (ಕಾಂಗ್ರೆಸ್), ಪಡೆದ ಮತ 262, ಗೆಲುವಿನ ಅಂತರ 13.</p>.<p>ವಾರ್ಡ್ ನಂ. 9: ಸಂದೇಶ ಜವಳಿ (ಬಿಜೆಪಿ)– 319, ಸಮೀಪದ ಸ್ಪರ್ಧಿ– ಹರೀಶ್ ಮಿಲ್ಕೇರಿ (ಕಾಂಗ್ರೆಸ್ ಬೆಂಬಲಿತ ಪಕ್ಷೇತರ), ಪಡೆದ ಮತ 289, ಗೆಲುವಿನ ಅಂತರ 21.</p>.<p class="Subhead">ವಾರ್ಡ್ ನಂ. 10: ಬಿ.ಗಣಪತಿ (ಕಾಂಗ್ರೆಸ್)– 284, ಸಮೀಪದ ಸ್ಪರ್ಧಿ– ಎಂ.ಮಹೇಶ್ (ಬಿಜೆಪಿ), ಪಡೆದ ಮತ 220, ಗೆಲುವಿನ ಅಂತರ 64.</p>.<p class="Subhead">ವಾರ್ಡ್ ನಂ. 11: ಜ್ಯೋತಿ ಮೋಹನ್ ಭಟ್ (ಬಿಜೆಪಿ)– 278, ಸಮೀಪದ ಸ್ಪರ್ಧಿ– ನವ್ಯಾ ವಿ.ರಾವ್ (ಕಾಂಗ್ರೆಸ್ ಬೆಂಬಲಿತ ಪಕ್ಷೇತರ), ಪಡೆದ ಮತ 194, ಗೆಲುವಿನ ಅಂತರ 84.</p>.<p class="Subhead">ವಾರ್ಡ್ ನಂ. 12: ರವೀಶ್ (ಬಾಬಿ) (ಬಿಜೆಪಿ)– 430(ಗೆಲುವು), ಸಮೀಪದ ಸ್ಪರ್ಧಿ– ಕೆ.ಎಸ್.ಕಿಶೋರ್ (ಕಾಂಗ್ರೆಸ್) ಪಡೆದ ಮತ 341, ಗೆಲುವಿನ ಅಂತರ 89.</p>.<p class="Subhead">ವಾರ್ಡ್ ನಂ. 13: ಗೀತಾ ರಮೇಶ್ (ಕಾಂಗ್ರೆಸ್)– 295, ಸಮೀಪದ<br />ಸ್ಪರ್ಧಿ– ಅನಿತಾ ಪೆರಾವೋ (ಬಿಜೆಪಿ), ಪಡೆದ ಮತ 146, ಗೆಲುವಿನ ಅಂತರ 149.</p>.<p class="Subhead">ವಾರ್ಡ್ ನಂ. 14: ಮಂಜುಳಾ ನಾಗೇಂದ್ರ (ಕಾಂಗ್ರೆಸ್)– 428, ಸಮೀಪದ ಸ್ಪರ್ಧಿ– ನಿಶಾ ಪ್ರಮೋದ್ ಪೂಜಾರಿ (ಬಿಜೆಪಿ), ಪಡೆದ ಮತ 343, ಗೆಲುವಿನ ಅಂತರ 85.</p>.<p class="Subhead">ವಾರ್ಡ್ ನಂ. 15: ರಹಮತ್ ಉಲ್ಲಾ ಅಸಾದಿ (ಕಾಂಗ್ರೆಸ್)– 324, ಸಮೀಪದ ಸ್ಪರ್ಧಿ– ದಯಾನಂದ ಸಾಲಿಯಾನ್ (ಬಿಜೆಪಿ), ಪಡೆದ ಮತ 213, ಗೆಲುವಿನ ಅಂತರ 111.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತೀರ್ಥಹಳ್ಳಿ: 23 ವರ್ಷಗಳ ನಂತರ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಗದ್ದುಗೆಯನ್ನು ಕಾಂಗ್ರೆಸ್ ಹಿಡಿಯುವ ಮೂಲಕ ಬಿಜೆಪಿ ಓಟಕ್ಕೆ ತಡೆಯೊಡ್ಡಿದೆ.</p>.<p>ಪಟ್ಟಣದ ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಎಣಿಕೆ ಕಾರ್ಯ ನಡೆಯಿತು. ಕೇವಲ 2 ಗಂಟೆಯೊಳಗೆ ಎಲ್ಲ 15 ವಾರ್ಡ್ಗಳ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ಪ್ರಕಟಿಸಿದರು.</p>.<p>ಕಾಂಗ್ರೆಸ್ 9 ಸ್ಥಾನ ಗೆಲ್ಲುವ ಮೂಲಕ ಬಹುಮತ ಪಡೆದಿದೆ. ಬಿಜೆಪಿ 6 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ, ಶಿವಮೊಗ್ಗ ರಂಗಾಯಣ ನಿರ್ದೇಶಕ ಬಿಜೆಪಿಯ ಸಂದೇಶ ಜವಳಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಂಗ್ರೆಸ್ನ ರಹಮತ್ ಉಲ್ಲಾ ಅಸಾದಿ ಸತತ 4ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.</p>.<p>ಬಿಜೆಪಿಯ ಸೊಪ್ಪುಗುಡ್ಡೆ ರಾಘವೇಂದ್ರ ಅವರು 3ನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ನ ಗೀತಾ ರಮೇಶ್, ಶಬನಮ್ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ.</p>.<p class="Subhead">ಬಿಜೆಪಿ ಮುಖಂಡ, ಮಾಜಿ ಸದಸ್ಯ ಜೆ.ಮಂಜುನಾಥಶೆಟ್ಟಿ, ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಆರ್.ರಾಘವೇಂದ್ರ ಶೆಟ್ಟಿ ಪರಾಭವಗೊಂಡಿದ್ದಾರೆ. ಸತತ 23 ವರ್ಷಗಳ ಬಿಜೆಪಿ ಆಡಳಿತಕ್ಕೆ ತೆರೆಬಿದ್ದಂತಾಗಿದೆ. 9 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದ್ದು, ಕೇವಲ 6 ಸ್ಥಾನಕ್ಕೆ ಬಿಜೆಪಿ ತೃಪ್ತಿಪಟ್ಟುಕೊಳ್ಳುವಂತಾಗಿದೆ.</p>.<p>ವಿಜೇತರ ವಿವರ ಇಂತಿದೆ:</p>.<p class="Subhead">ವಾರ್ಡ್ ನಂ. 1: ಸೊಪ್ಪುಗುಡ್ಡೆ ರಾಘವೇಂದ್ರ (ಬಿಜೆಪಿ)– 278, ಸಮೀಪದ ಸ್ಪರ್ಧಿ– ಎನ್.ಕೆ.ಪ್ರದೀಪ್ (ಕಾಂಗ್ರೆಸ್), ಪಡೆದ ಮತ 94, ಗೆಲುವಿನ ಅಂತರ 184 ಮತ.</p>.<p class="Subhead">ವಾರ್ಡ್ ನಂ. 2: ಯತಿರಾಜ್ (ನವೀನ್), (ಬಿಜೆಪಿ)– 422, ಬಿ.ಆರ್.ರಾಘವೇಂದ್ರ ಶೆಟ್ಟಿ (ಕಾಂಗ್ರೆಸ್), ಪಡೆದ ಮತ 372, ಗೆಲುವಿನ ಅಂತರ 50.</p>.<p class="Subhead">ವಾರ್ಡ್ ನಂ. 3: ರತ್ನಾಕರ ಶೆಟ್ಟಿ (ದತ್ತಣ್ಣ), (ಕಾಂಗ್ರೆಸ್)– 340, ಸಮೀಪದ ಸ್ಪರ್ಧಿ– ನವೀನ್ ಕುಮಾರ್ (ಬಿಜೆಪಿ), ಪಡೆದ ಮತ 213, ಗೆಲುವಿನ ಅಂತರ 127.</p>.<p class="Subhead">ವಾರ್ಡ್ ನಂ. 4: ನಮ್ರತ್ ರಮೇಶ್ (ಕಾಂಗ್ರೆಸ್)– 349,ಸಮೀಪದ ಸ್ಪರ್ಧಿ– ಸಿ.ಶ್ರೀನಿವಾಸ್ (ಬಿಜೆಪಿ), ಪಡೆದ ಮತ 129, ಗೆಲುವಿನ ಅಂತರ 220.</p>.<p class="Subhead">ವಾರ್ಡ್ ನಂ. 5: ಸುಶೀಲಾ ಶೆಟ್ಟಿ (ಕಾಂಗ್ರೆಸ್)– 319, ಸಮೀಪದ ಸ್ಪರ್ಧಿ– ಕೆ.ವಿದ್ಯಾವತಿ (ಬಿಜೆಪಿ), ಪಡೆದ ಮತ 250, ಗೆಲುವಿನ ಅಂತರ 69.</p>.<p class="Subhead">ವಾರ್ಡ್ ನಂ. 6: ಶಬನಮ್ (ಕಾಂಗ್ರೆಸ್) ಪಡೆದ ಮತ 302, ಸಮೀಪದ ಸ್ಪರ್ಧಿ– ಸುಷ್ಮಾ ಮಹೇಶ್ (ಬಿಜೆಪಿ), ಪಡೆದ ಮತ 195, ಗೆಲುವಿನ ಅಂತರ 7.</p>.<p class="Subhead">ವಾರ್ಡ್ ನಂ. 7: ಜಯಪ್ರಕಾಕಾಶ್ ಶೆಟ್ಟಿ (ಜೈಯು) (ಕಾಂಗ್ರೆಸ್)– 253,ಸಮೀಪದ<br />ಸ್ಪರ್ಧಿ– ಜೆ.ಮಂಜುನಾಥಶೆಟ್ಟಿ (ಬಿಜೆಪಿ), ಪಡೆದ ಮತ 222, ಗೆಲುವಿನ ಅಂತರ 31.</p>.<p class="Subhead">ವಾರ್ಡ್ ನಂ. 8: ಜ್ಯೋತಿ ಗಣೇಶ್ (ಬಿಜೆಪಿ)– 275, ಸಮೀಪದ ಸ್ಪರ್ಧಿ– ಟಿ.ಸಿ.ವಿಜಯ (ಕಾಂಗ್ರೆಸ್), ಪಡೆದ ಮತ 262, ಗೆಲುವಿನ ಅಂತರ 13.</p>.<p>ವಾರ್ಡ್ ನಂ. 9: ಸಂದೇಶ ಜವಳಿ (ಬಿಜೆಪಿ)– 319, ಸಮೀಪದ ಸ್ಪರ್ಧಿ– ಹರೀಶ್ ಮಿಲ್ಕೇರಿ (ಕಾಂಗ್ರೆಸ್ ಬೆಂಬಲಿತ ಪಕ್ಷೇತರ), ಪಡೆದ ಮತ 289, ಗೆಲುವಿನ ಅಂತರ 21.</p>.<p class="Subhead">ವಾರ್ಡ್ ನಂ. 10: ಬಿ.ಗಣಪತಿ (ಕಾಂಗ್ರೆಸ್)– 284, ಸಮೀಪದ ಸ್ಪರ್ಧಿ– ಎಂ.ಮಹೇಶ್ (ಬಿಜೆಪಿ), ಪಡೆದ ಮತ 220, ಗೆಲುವಿನ ಅಂತರ 64.</p>.<p class="Subhead">ವಾರ್ಡ್ ನಂ. 11: ಜ್ಯೋತಿ ಮೋಹನ್ ಭಟ್ (ಬಿಜೆಪಿ)– 278, ಸಮೀಪದ ಸ್ಪರ್ಧಿ– ನವ್ಯಾ ವಿ.ರಾವ್ (ಕಾಂಗ್ರೆಸ್ ಬೆಂಬಲಿತ ಪಕ್ಷೇತರ), ಪಡೆದ ಮತ 194, ಗೆಲುವಿನ ಅಂತರ 84.</p>.<p class="Subhead">ವಾರ್ಡ್ ನಂ. 12: ರವೀಶ್ (ಬಾಬಿ) (ಬಿಜೆಪಿ)– 430(ಗೆಲುವು), ಸಮೀಪದ ಸ್ಪರ್ಧಿ– ಕೆ.ಎಸ್.ಕಿಶೋರ್ (ಕಾಂಗ್ರೆಸ್) ಪಡೆದ ಮತ 341, ಗೆಲುವಿನ ಅಂತರ 89.</p>.<p class="Subhead">ವಾರ್ಡ್ ನಂ. 13: ಗೀತಾ ರಮೇಶ್ (ಕಾಂಗ್ರೆಸ್)– 295, ಸಮೀಪದ<br />ಸ್ಪರ್ಧಿ– ಅನಿತಾ ಪೆರಾವೋ (ಬಿಜೆಪಿ), ಪಡೆದ ಮತ 146, ಗೆಲುವಿನ ಅಂತರ 149.</p>.<p class="Subhead">ವಾರ್ಡ್ ನಂ. 14: ಮಂಜುಳಾ ನಾಗೇಂದ್ರ (ಕಾಂಗ್ರೆಸ್)– 428, ಸಮೀಪದ ಸ್ಪರ್ಧಿ– ನಿಶಾ ಪ್ರಮೋದ್ ಪೂಜಾರಿ (ಬಿಜೆಪಿ), ಪಡೆದ ಮತ 343, ಗೆಲುವಿನ ಅಂತರ 85.</p>.<p class="Subhead">ವಾರ್ಡ್ ನಂ. 15: ರಹಮತ್ ಉಲ್ಲಾ ಅಸಾದಿ (ಕಾಂಗ್ರೆಸ್)– 324, ಸಮೀಪದ ಸ್ಪರ್ಧಿ– ದಯಾನಂದ ಸಾಲಿಯಾನ್ (ಬಿಜೆಪಿ), ಪಡೆದ ಮತ 213, ಗೆಲುವಿನ ಅಂತರ 111.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>