ಸಾಗರ: ಇಲ್ಲಿನ ಗೋಪಾಲಗೌಡ ನಗರ ಬಡಾವಣೆಯಲ್ಲಿ ಮಹಿಳೆಯೊಬ್ಬರ ಮತಾಂತರ ಮಾಡಲಾಗಿದೆ ಎಂಬ ಅನುಮಾನದ ಕಾರಣಅವರ ಮನೆಯ ಮುಂದೆ ಜನರ ಗುಂಪು ಜಮಾವಣೆಯಾಗಿತ್ತು.
ಮಹಿಳೆಯೊಬ್ಬರು ತನ್ನ ಗಂಡ ಕುಡಿಯುವುದನ್ನು ಬಿಟ್ಟರೆ ಮೇರಿ ಮಾತೆಯ ಪ್ರತಿಮೆ ತಂದು ಪೂಜಿಸುವುದಾಗಿ ಹರಕೆ ಹೊತ್ತಿದ್ದರು ಎನ್ನಲಾಗಿದೆ. ಹೀಗಾಗಿ ಭಾನುವಾರ ಅವರು ಮೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿದ್ದರು.
ಇದು ಮತಾಂತರವಾಗಿದೆ ಎಂಬ ಗೊಂದಲಕ್ಕೆ ಕಾರಣವಾಗಿತ್ತು. ಬಳಿಕ ಯಾವುದೇ ರೀತಿಯ ಮತಾಂತರ ನಡೆದಿಲ್ಲ ಎಂಬ ವಿಷಯ ಗೊತ್ತಾಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.