ಬೆಂಗಳೂರಿನಿಂದ ಪಟ್ಟಣದ ಸಮೀಪ ಮೇಲಿನ ಕುರುವಳ್ಳಿಗೆ ಬಂದ 26 ವರ್ಷದ ಯುವಕನಿಗೆ ಸೋಂಕು ತಗಲಿದೆ. ಈತ ಎಲ್ಲ ಕಡೆ ಸಂಚರಿಸಿದ್ದಾನೆ ಎನ್ನಲಾಗಿದೆ.
ಕೊರೊನಾ ಸೋಂಕು ತಡೆಗಟ್ಟಲುಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಾಸಕ ಆರಗ ಜ್ನಾನೇಂದ್ರ, ತಹಶಿಲ್ದಾರ್ ಡಾ.ಎಸ್.ಬಿ.ಶ್ರೀಪಾದ್, ತಾಲ್ಲೂಕು ಪಂಚಾಯಿತಿ ಇಒ ಆಶಾಲತಾ, ತಾಲ್ಲೂಕು ವೈದ್ಯಾಧಿಕಾರಿ ಡಾ.ಆಶೋಕ್ ಗ್ರಾಮ ಪಂಚಾಯತಿ ಗಳಿಗೆ ಭೇಟಿ ನೀಡಿದರು.ಸೋಂಕು ತಗಲಿದ ಸ್ಥಳವನ್ನು ಸೀಲ್ ಡೌನ್ ಮಾಡಲಾಗಿದೆ.