ಶಿವಮೊಗ್ಗ: ಇಡೀ ಪ್ರಪಂಚವೇ ಸಂಕಷ್ಟದಲ್ಲಿರುವಾಗ ಧೈರ್ಯ ತುಂಬಿದವರು, ಬದುಕಿನ ಭರವಸೆ ಕಳೆದುಕೊಂಡು ಕೈಚೆಲ್ಲಿ ಕುಳಿತಾಗ ಆಸರೆಯಾದವರು, ಕಾಲಚಕ್ರದ ಜತೆಗೆ ಪೈಪೋಟಿಗಿಳಿದು ಜನರ ಆರೋಗ್ಯವನ್ನು ಕಾಪಾಡಿದವರು, ಕೊರೊನಾ ಎಂಬ ರೋಗ ಬಂದು ಸಂಬಂಧಗಳನ್ನೇ ಮರೆತಿರುವಾಗ ಬಂಧುವಂತೆ ಆರೈಕೆ ಮಾಡಿದ ಮಹಾತಾಯಿಯರು ಶುಶ್ರೂಷಕಿಯರು ಎಂದು ಸರ್ಜಿ ಆಸ್ಪತ್ರೆ ಮುಖ್ಯಸ್ಥ ಡಾ.ಧನಂಜಯ ಸರ್ಜಿ ಶ್ಲಾಘಿಸಿದರು.