ಜಂಟಿ ನಿಬಂಧಕರ ಆದೇಶದ ವಿರುದ್ಧ ಎಲ್ಲ ನಿರ್ದೇಶಕರೂ ಹೈಕೋರ್ಟ್ ಮೊರೆ ಹೋಗಿದ್ದರು. ಆಗ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದೇ ನ.17 ರಂದು ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿತ್ತು. ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತ್ತು. ಅನರ್ಹತೆ ಒಳಗಾಗಿದ್ದ ಈಗಿನ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ನಿರ್ದೇಶಕರಾದ ಜೆ.ಪಿ.ಯೋಗೇಶ್, ಕೆ.ಪಿ.ದುಗ್ಗಪ್ಪಗೌಡ, ಶ್ರೀಪಾದರಾವ್, ಎಂ.ಎಂ.ಪರಮೇಶ್, ವಿಜಯದೇವ್ ಮತ್ತು ಅಗಡಿ ಅಶೋಕ್ ಅವರು ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕರಿಗೆ ಮೇಲ್ಮನವಿ ಸಲ್ಲಿಸಿದ್ದರು.