<p><strong>ಶಿವಮೊಗ್ಗ:</strong> ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ ಗ್ರಾಮಸ್ಥರೊಬ್ಬರ ಬಳಿ ಲಂಚ ಪಡೆಯುತ್ತಿದ್ದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಿಬ್ಬಂದಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದಿದ್ದಾರೆ.</p>.<p>ಕಚೇರಿಯ ಕಡತ ನಿರ್ವಾಹಕಿ ಎಂ.ಎಸ್.ಸುನೀತಾ ಎಸಿಬಿ ಬಲೆಗೆ ಬಿದ್ದವರು.</p>.<p>ಶಿಕಾರಿಪುರ ತಾಲ್ಲೂಕು ಬಗಣಕಟ್ಟೆಯ ರೈತ ಮಲ್ಲೇಶಪ್ಪ ತಮ್ಮ ಪತ್ನಿ ಎಂ.ಸಾವಿತ್ರಮ್ಮ ಅವರ ಹೆಸರಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ₹ 1ಲಕ್ಷ ಸಾಲಕ್ಕಾಗಿ 2018ರಲ್ಲಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು. ಸಾವಿತ್ರಮ್ಮ ಅವರ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಆಯ್ಕೆಯಾಗದ್ದು ಅದನ್ನು ಅನುಮೋದನೆಗೆ ಕಳುಹಿಸಲು ಸುನೀತಾ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದರು.</p>.<p>ಎಸಿಬಿ ಡಿವೈಎಸ್ಪಿ ಲೋಕೇಶ್ ಮತ್ತವರ ತಂಡ ದಾಳಿ ನಡೆಸಿ, ವಶಕ್ಕೆ ಪಡೆದಿದೆ. ಈ ಪ್ರಕರಣದ ಪರಿಣಾಮ ನಿಗಮದಲ್ಲಿ ಬಾಕಿ ಇದ್ದ ಎಲ್ಲ 40 ಅರ್ಜಿಗಳನ್ನೂ ತ್ವರಿತವಾಗಿ ವಿಲೇವಾರಿ ಮಾಡುವಂತೆ ಎಸಿಬಿ ಪೊಲೀಸರು ತಾಕೀತು ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ ಗ್ರಾಮಸ್ಥರೊಬ್ಬರ ಬಳಿ ಲಂಚ ಪಡೆಯುತ್ತಿದ್ದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಿಬ್ಬಂದಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದಿದ್ದಾರೆ.</p>.<p>ಕಚೇರಿಯ ಕಡತ ನಿರ್ವಾಹಕಿ ಎಂ.ಎಸ್.ಸುನೀತಾ ಎಸಿಬಿ ಬಲೆಗೆ ಬಿದ್ದವರು.</p>.<p>ಶಿಕಾರಿಪುರ ತಾಲ್ಲೂಕು ಬಗಣಕಟ್ಟೆಯ ರೈತ ಮಲ್ಲೇಶಪ್ಪ ತಮ್ಮ ಪತ್ನಿ ಎಂ.ಸಾವಿತ್ರಮ್ಮ ಅವರ ಹೆಸರಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ₹ 1ಲಕ್ಷ ಸಾಲಕ್ಕಾಗಿ 2018ರಲ್ಲಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು. ಸಾವಿತ್ರಮ್ಮ ಅವರ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಆಯ್ಕೆಯಾಗದ್ದು ಅದನ್ನು ಅನುಮೋದನೆಗೆ ಕಳುಹಿಸಲು ಸುನೀತಾ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದರು.</p>.<p>ಎಸಿಬಿ ಡಿವೈಎಸ್ಪಿ ಲೋಕೇಶ್ ಮತ್ತವರ ತಂಡ ದಾಳಿ ನಡೆಸಿ, ವಶಕ್ಕೆ ಪಡೆದಿದೆ. ಈ ಪ್ರಕರಣದ ಪರಿಣಾಮ ನಿಗಮದಲ್ಲಿ ಬಾಕಿ ಇದ್ದ ಎಲ್ಲ 40 ಅರ್ಜಿಗಳನ್ನೂ ತ್ವರಿತವಾಗಿ ವಿಲೇವಾರಿ ಮಾಡುವಂತೆ ಎಸಿಬಿ ಪೊಲೀಸರು ತಾಕೀತು ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>