ಕಬ್ಬಿನ ಬೆಳೆಯಿಂದ ಬರುವ ಆದಾಯಕ್ಕಿಂತ ನಷ್ಟವೇ ಹೆಚ್ಚಾಗುತ್ತಿದ್ದು, ಕೂಲಿಕಾರರ ಅಭಾವವೂ ಉಂಟಾಗಿದೆ. ಹೀಗಾಗಿ ಕಬ್ಬು ಬೆಳೆಯುವುದು ಕಷ್ಟವಾಗಿದೆ. ಕಬ್ಬು ಬೆಳೆಯಲು 12 ತಿಂಗಳು ಪೋಷಣೆ ಮಾಡಬೇಕಾಗುತ್ತದೆ. ಅಲ್ಲದೇ ಮಂಗ, ಹಂದಿ, ನರಿ ಇನ್ನೂ ಹಲವು ಪ್ರಾಣಿಗಳ ಉಪಟಳದಿಂದ ರಕ್ಷಿಸಬೇಕಾಗುತ್ತದೆ. ಇವೆಲ್ಲದರ ಸಾಧಕ–ಬಾಧಕ ಅರಿತ ಇಂದಿನ ಯುವಕರು ಈ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಮುಂದಿನ ಪೀಳಿಗೆಗೆ ಆಲೆಮನೆ ಎಂದರೆ ರಾಮಾಯಣ ಮಹಾಭಾರತದ ಕಥೆಯಂತೆ ಚಿತ್ರಪಟದಲ್ಲಿ ತೋರಿಸುವ ಸ್ಥಿತಿ ಉಂಟಾಗಬಹುದು.