ಧಿಕ್ಕಾರ ಹೇಳಲು ಹಿಂಜರಿಕೆ ಬೇಡ
ದುಡಿಯುವ ವರ್ಗವನ್ನು ಶೋಷಿಸುವ ಶಕ್ತಿಗಳ ವಿರುದ್ಧ ಚಳವಳಿ ನಡೆದಾಗ ಅವುಗಳ ವಿರುದ್ಧ ಧಿಕ್ಕಾರ ಹೇಳಲು ಸಾಹಿತಿ ಕಲಾವಿದರು ಹಿಂಜರಿಯಬಾರದು ಎಂದು ಚುಕ್ಕಿ ನಂಜುಂಡಸ್ವಾಮಿ ಮನವಿ ಮಾಡಿದರು. ಹೋರಾಟಗಳಿಂದ ಬದಲಾವಣೆ ಸಾಧ್ಯವಿಲ್ಲ ಎಂಬ ನಿರಾಶಾವಾವನ್ನು ಕೈ ಬಿಡಬೇಕು. ಧಿಕ್ಕಾರ ಕೂಗಿದಾಕ್ಷಣ ನಮ್ಮ ಘನತೆ ಕಡಿಮೆಯಾಗುತ್ತದೆ ಎಂಬ ಮನೋಭಾವ ಸಲ್ಲದು ಎಂದರು.