ಬೆಳೆ ವಿಮಾ ಕಂಪನಿಗಳು ರೈತರಿಂದ ಹಣ ಕಟ್ಟಿಸಿಕೊಂಡು ವಿಮಾ ಹಣವನ್ನು ನೀಡದೇ ವಂಚಿಸುತ್ತಿದ್ದಾರೆ. ಅಂತಹ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಈಗಾಗಲೇ ಕೆಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ರೈತರ ಬೆಳೆಗೆ ತೊಂದರೆಯಾಗದಂತೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ ಗೌಡ ನಿಸರಾಣಿ, ಉಮೇಶ್ ಪಾಟೀಲ್, ಮಂಜುನಾಥ್ ಅರೆಕೊಪ್ಪ, ಸೈಯದ್ ಶಫಿವುಲ್ಲಾ, ತಾಲ್ಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಕಾರ್ಯಧ್ಯಕ್ಷ ಶಿವಪ್ಪ ಹುಣಸಳ್ಳಿ, ಮೇಘರಾಜ್, ಶಿವಮೂರ್ತಿ ಸಾಹುಕಾರ, ಫಾಲಾಕ್ಷಪ್ಪ, ಹುಚ್ಚಪ್ಪ, ಹಿರಿಯಪ್ಪ, ಸೋಮಶೇಖರ ಭಾಗವಹಿಸಿದ್ದರು.