ಶಿವಮೊಗ್ಗ: ‘ಸೊರಬ ತಾಲ್ಲೂಕಿನಿಂದ ನಾಲ್ಕು ವರ್ಷಗಳಲ್ಲಿ 14 ಜನ ತಹಶೀಲ್ದಾರರು ವರ್ಗಾವಣೆ ಆಗಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದವರು ಅಪಪ್ರಚಾರ ಮಾಡುತ್ತಿದ್ದಾರೆ. ವರ್ಗಾವಣೆ ಆದವರ ಪಟ್ಟಿಕೊಡಬೇಕು; ಇಲ್ಲವೇ ಜನರಿಗೆ ತಪ್ಪು ಮಾಹಿತಿ ಕೊಟ್ಟಿದ್ದಕ್ಕೆ ಕ್ಷಮೆ ಕೇಳಬೇಕು. ಇದಕ್ಕೆ ತಪ್ಪಿದಲ್ಲಿ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ’ ಎಂದು ಸೊರಬ ಶಾಸಕ ಕುಮಾರ್ ಬಂಗಾರಪ್ಪ ಎಚ್ಚರಿಸಿದರು.