‘ಮಾತೆತ್ತಿದರೆ ಬಿಜೆಪಿಯವರು ಈದ್ಗಾ ಮೈದಾನ, ರಾಮಜನ್ಮಭೂಮಿ ಎನ್ನುತ್ತಾರೆ. ಮನುಷ್ಯನ ಹೊಟ್ಟೆಗೆ ಅನ್ನ ನೀಡುವ, ದುಡಿಯುವ ಕೈಗಳಿಗೆ ಉದ್ಯೋಗ ಕೊಡುವ ಕೆಲಸ ಆಗಬೇಕು. ಜನರ ಬದುಕಿಗೆ ಪೂರಕವಾದ ಯಾವುದೇ ಕೆಲಸವನ್ನು ಬಿಜೆಪಿ ಮಾಡಿಲ್ಲ. ಕೇವಲ ಜಾತಿ, ಧರ್ಮದ ನಡುವೆ ಕಂದಕ ಸೃಷ್ಟಿಸುತ್ತಾ ಇದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.