<p><strong>ಕುಂಸಿ (ಶಿವಮೊಗ್ಗ):</strong> ಇಲ್ಲಿನ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಮಠಪತಿ ತಮಗೆ ಸಿಕ್ಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರವನ್ನು ಅದರ ಮಾಲೀಕರಿಗೆ ಹಿಂದಿರುಗಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.</p>.<p>ಕುಂಸಿ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಲಾರಿ– ಕಾರಿನ ನಡುವೆ ಅಪಘಾತ ಸಂಭವಿಸಿತ್ತು.ಕಡೂರು ನಿವಾಸಿ, ಕೆಇಬಿ ನೌಕರ ಸುಬ್ಬಯ್ಯ, ಪತ್ನಿ ಭಾರತಿ ಅವರಿದ್ದ ಕಾರು ಅಪಘಾತಕ್ಕೀಡಾಗಿದ್ದು, ಮಹಿಳೆ ಮೃತಪಟ್ಟಿದ್ದರು.</p>.<p>ನವೀನ್ ಕುಮಾರ್ ಆಯನೂರಿಗೆ ತೆರಳುವ ಮಾರ್ಗದಲ್ಲಿ ಅಪಘಾತಗೊಂಡಿದ್ದ ಕಾರನ್ನು ಪರಿಶೀಲಿಸಿದ್ದರು. ಆಗ ಬ್ಯಾಗ್ ಕಂಡುಬಂದಿದ್ದು, ಠಾಣೆಗೆ ಒಯ್ದು ಪರಿಶೀಲಿಸಿದಾಗ ಆಭರಣಗಳಿದ್ದುದು ಕಂಡುಬಂತು.</p>.<p>ಸುಬ್ಬಯ್ಯ ಅವರು ಆಭರಣ ನಾಪತ್ತೆಯಾದ ಬಗ್ಗೆ ದೂರು ನೀಡಿರಲಿಲ್ಲ. ನವೀನ್ ಕುಮಾರ್ ಅವರು ಸುಬ್ಬಯ್ಯ ಅವರಿಗೆ ಕರೆ ಮಾಡಿ ಠಾಣೆಗೆ ಕರೆಯಿಸಿ ಆಭರಣಗಳನ್ನು ನೀಡಿದರು. ಇವುಗಳ ಮೌಲ್ಯ ಅಂದಾಜು ₹ 15 ಲಕ್ಷ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂಸಿ (ಶಿವಮೊಗ್ಗ):</strong> ಇಲ್ಲಿನ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಮಠಪತಿ ತಮಗೆ ಸಿಕ್ಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರವನ್ನು ಅದರ ಮಾಲೀಕರಿಗೆ ಹಿಂದಿರುಗಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.</p>.<p>ಕುಂಸಿ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಲಾರಿ– ಕಾರಿನ ನಡುವೆ ಅಪಘಾತ ಸಂಭವಿಸಿತ್ತು.ಕಡೂರು ನಿವಾಸಿ, ಕೆಇಬಿ ನೌಕರ ಸುಬ್ಬಯ್ಯ, ಪತ್ನಿ ಭಾರತಿ ಅವರಿದ್ದ ಕಾರು ಅಪಘಾತಕ್ಕೀಡಾಗಿದ್ದು, ಮಹಿಳೆ ಮೃತಪಟ್ಟಿದ್ದರು.</p>.<p>ನವೀನ್ ಕುಮಾರ್ ಆಯನೂರಿಗೆ ತೆರಳುವ ಮಾರ್ಗದಲ್ಲಿ ಅಪಘಾತಗೊಂಡಿದ್ದ ಕಾರನ್ನು ಪರಿಶೀಲಿಸಿದ್ದರು. ಆಗ ಬ್ಯಾಗ್ ಕಂಡುಬಂದಿದ್ದು, ಠಾಣೆಗೆ ಒಯ್ದು ಪರಿಶೀಲಿಸಿದಾಗ ಆಭರಣಗಳಿದ್ದುದು ಕಂಡುಬಂತು.</p>.<p>ಸುಬ್ಬಯ್ಯ ಅವರು ಆಭರಣ ನಾಪತ್ತೆಯಾದ ಬಗ್ಗೆ ದೂರು ನೀಡಿರಲಿಲ್ಲ. ನವೀನ್ ಕುಮಾರ್ ಅವರು ಸುಬ್ಬಯ್ಯ ಅವರಿಗೆ ಕರೆ ಮಾಡಿ ಠಾಣೆಗೆ ಕರೆಯಿಸಿ ಆಭರಣಗಳನ್ನು ನೀಡಿದರು. ಇವುಗಳ ಮೌಲ್ಯ ಅಂದಾಜು ₹ 15 ಲಕ್ಷ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>